Back to Top

ದರ್ಶನ್ ಹಾಗೂ ಶೆಡ್‌ಗ್ಯಾಂಗ್‌ ನ್ಯಾಯಾಂಗ ಬಂಧನ ವಿಸ್ತರಣೆ!

SSTV Profile Logo SStv August 23, 2025
ದರ್ಶನ್ ಹಾಗೂ ಶೆಡ್‌ಗ್ಯಾಂಗ್‌ಗೆ ಮತ್ತೊಂದು ದೊಡ್ಡ ಶಾಕ್
ದರ್ಶನ್ ಹಾಗೂ ಶೆಡ್‌ಗ್ಯಾಂಗ್‌ಗೆ ಮತ್ತೊಂದು ದೊಡ್ಡ ಶಾಕ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರ ಗೌಡ ಹಾಗೂ ಶೆಡ್‌ಗ್ಯಾಂಗ್‌ನ ಇತರ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಕೋರ್ಟ್ ಮತ್ತೊಮ್ಮೆ ವಿಸ್ತರಿಸಿದೆ. ಸೆಪ್ಟೆಂಬರ್ 9ರವರೆಗೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲೇ ಇರಲಿದ್ದಾರೆ.

ಇಂದು 64ನೇ ಸಿಸಿಹೆಚ್ ಕೋರ್ಟ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಹಾಗೂ ಇತರ ಆರೋಪಿಗಳನ್ನು ಹಾಜರುಪಡಿಸಲಾಯಿತು. ವಕೀಲರು ಆಕ್ಷೇಪಣೆ ಸಲ್ಲಿಸಲು ಸಮಯವಕಾಶ ಕೇಳಿದ ಕಾರಣ ಕೋರ್ಟ್ ಮತ್ತಷ್ಟು ವಿಚಾರಣೆಗೆ ಮುಂದಾಗಿದೆ. ಈ ನಡುವೆ ಪವಿತ್ರ ಗೌಡ ಪರವಾಗಿ ಸ್ಯಾಟುಚರಿ ಜಾಮೀನು ಅರ್ಜಿ ಸಲ್ಲಿಕೆಯಾಗಿದೆ.

ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದ ಬಳಿಕ ಆಗಸ್ಟ್ 14ರಿಂದಲೇ ದರ್ಶನ್ ಹಾಗೂ ತಂಡ ಜೈಲಿನಲ್ಲಿದ್ದಾರೆ. ಇದೀಗ ಸೆಪ್ಟೆಂಬರ್ 9ರವರೆಗೆ ಬಂಧನ ವಿಸ್ತಾರವಾದ ಕಾರಣ, ಪ್ರಕರಣದ ಮುಂದಿನ ಹಂತವು ಇನ್ನಷ್ಟು ಕುತೂಹಲ ಹುಟ್ಟಿಸಿದೆ.