Back to Top

ದರ್ಶನ್ "ವಿಷ" ವಿವಾದದ ನಡುವೆ ರಮೇಶ್ ಅರವಿಂದ್ ಹೇಳಿದ್ದೇನು? ಅಭಿಮಾನಿಗಳ ಕುತೂಹಲ ಹೆಚ್ಚಿತು!

SSTV Profile Logo SStv September 11, 2025
ದರ್ಶನ್ ವಿಚಾರಕ್ಕೆ ರಮೇಶ್ ಅರವಿಂದ್ ಮಾತು
ದರ್ಶನ್ ವಿಚಾರಕ್ಕೆ ರಮೇಶ್ ಅರವಿಂದ್ ಮಾತು

ಕನ್ನಡ ಚಿತ್ರರಂಗದಲ್ಲಿ ಇದೀಗ ನಟ ದರ್ಶನ್ ಪ್ರಕರಣವೇ ಚರ್ಚೆಯ ವಿಷಯವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಪ್ರಸ್ತುತ ಜೈಲಿನಲ್ಲಿ ಇದ್ದಾರೆ. ಇತ್ತೀಚೆಗೆ, ಸೆಪ್ಟೆಂಬರ್ 9ರಂದು ದರ್ಶನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರಾಗಿದ್ದರು. ಆ ವೇಳೆ ಜೈಲಿನ ಪರಿಸ್ಥಿತಿಯಿಂದ ಕಂಗೆಟ್ಟ ದರ್ಶನ್, ನ್ಯಾಯಾಧೀಶರ ಮುಂದೆ “ನನಗೆ ವಿಷ ಕೊಡುವಂತೆ ಆದೇಶಿಸಿ” ಎಂದು ಹೇಳಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿತು. ನ್ಯಾಯಾಧೀಶರು ಈ ಬೇಡಿಕೆಗೆ ಸ್ಪಷ್ಟವಾಗಿ ನಿರಾಕರಿಸಿದ್ದು, ಜೈಲಿನೊಳಗಿನ ಪರಿಸ್ಥಿತಿ ಮತ್ತು ದರ್ಶನ್ ಅವರ ಆರೋಗ್ಯದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ.

ಈ ನಡುವೆಯೇ, ನಟ ರಮೇಶ್ ಅರವಿಂದ್ ತಮ್ಮ 61ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹುಟ್ಟುಹಬ್ಬದ ವಿಶೇಷವಾಗಿ ತಮ್ಮ ಮುಂದಿನ ಸಿನಿಮಾ “ದೈಜಿ”ಯ ಟೀಸರ್‌ನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ದರ್ಶನ್ ಪ್ರಕರಣದ ಬಗ್ಗೆ ಅವರನ್ನು ಪ್ರಶ್ನಿಸಲಾಯಿತು.

ರಮೇಶ್ ಅರವಿಂದ್ ಅವರು ಶಾಂತವಾಗಿ ಪ್ರತಿಕ್ರಿಯಿಸಿ, “ದರ್ಶನ್ ಪ್ರಕರಣದಲ್ಲಿ ಈಗ ಏನಾಗಿದೆ ಅಂತಾ ನನಗೆ ಡಿಟೇಲ್ ಆಗಿ ಗೊತ್ತಿಲ್ಲ. ನೀವು ಹೇಳಿದ್ದನ್ನು ಕೇಳಿದಾಗ, ನಮ್ಮ ಸಹೋದ್ಯೋಗಿಗೆ ಈ ರೀತಿ ಆಗಿದೆ ಅಂತ ಹೇಳ್ತೀದ್ದೀರಾ. ಆದರೆ ಕಾನೂನು ಅಂತ ಒಂದು ಇದೆ. ಅದರ ಪ್ರಕಾರ ಎಲ್ಲವೂ ನಡೆಯಬೇಕು” ಎಂದು ಅಭಿಪ್ರಾಯಪಟ್ಟರು.

ರಮೇಶ್ ಅರವಿಂದ್ ಅವರ ಪ್ರತಿಕ್ರಿಯೆಯಿಂದ, ಅವರು ದರ್ಶನ್ ಕುರಿತು ನೇರವಾಗಿ ಯಾವುದೇ ತೀರ್ಪು ನೀಡದೆ, ಕಾನೂನು ಪ್ರಕ್ರಿಯೆಯ ಮೇಲಿನ ನಂಬಿಕೆಯನ್ನು ವ್ಯಕ್ತಪಡಿಸಿರುವುದು ಸ್ಪಷ್ಟವಾಗಿದೆ. ಅವರ ಮಾತುಗಳಲ್ಲಿ, “ಕಾನೂನು ಪ್ರಕಾರವೇ ಎಲ್ಲಾ ವಿಚಾರಗಳು ನಿರ್ಧಾರವಾಗಬೇಕು” ಎಂಬ ಸಂದೇಶವಿದೆ.

ದರ್ಶನ್ ಅವರ ಈ ನಡೆ ಅವರ ಆಪ್ತರು, ಅಭಿಮಾನಿಗಳು ಹಾಗೂ ಸಹೋದ್ಯೋಗಿಗಳನ್ನು ಬೆಚ್ಚಿಬೀಳಿಸಿದೆ. ಇದೇ ಸಂದರ್ಭದಲ್ಲಿ, ರಮೇಶ್ ಅರವಿಂದ್ ಅವರ ಪ್ರತಿಕ್ರಿಯೆ, ಸಂಯಮದಿಂದ, ಕಾನೂನು ಪ್ರಕ್ರಿಯೆಯನ್ನು ಗೌರವಿಸುವ ರೀತಿಯಲ್ಲಿತ್ತು. ದರ್ಶನ್ ಪ್ರಕರಣದ ಮುಂದಿನ ಬೆಳವಣಿಗೆ ಹೇಗಾಗುತ್ತದೆ ಎಂಬ ಕುತೂಹಲ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದವರಲ್ಲಿಯೂ ಹೆಚ್ಚುತ್ತಿದೆ.