ಭೀಮ ಸಿನಿಮಾದ ನಟಿ ಆಶ್ ಮೆಲೋ ಸ್ಕೈಲರ್ ಕೇವಲ 7 ದಿನದಲ್ಲೇ ‘ಹಳ್ಳಿ ಪವರ್’ ಶೋ ಬಿಟ್ಟರು! ಕಾರಣವೇನು?


ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಹಳ್ಳಿ ಪವರ್’ ಈಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ನಗರ ಜೀವನವನ್ನು ಬಿಟ್ಟು ಹಳ್ಳಿಯ ವಾತಾವರಣದಲ್ಲಿ 12 ಮಂದಿ ಸ್ಪರ್ಧಿಗಳು ಬದುಕು ಕಟ್ಟಿಕೊಳ್ಳುವ ಈ ಶೋದಲ್ಲಿ ಸಾಕಷ್ಟು ಸವಾಲುಗಳು, ಭಿನ್ನಾಭಿಪ್ರಾಯಗಳು ಹಾಗೂ ಭಾವನಾತ್ಮಕ ಕ್ಷಣಗಳೂ ನಡೆಯುತ್ತಿವೆ. ಇತ್ತೀಚೆಗೆ ಶೋನಿಂದ ನಾಲ್ವರು ಸ್ಪರ್ಧಿಗಳು ಹೊರ ನಡೆದಿದ್ದಾರೆ. ಇದರಲ್ಲಿ ಒಬ್ಬರು ಎಲಿಮಿನೇಟ್ ಆಗಿದ್ದರೆ, ಒಬ್ಬರು ಗಾಯದ ಕಾರಣದಿಂದ ಹೊರಹೋದರು. ಉಳಿದ ಇಬ್ಬರು ವೈಯಕ್ತಿಕ ಕಾರಣ ನೀಡಿ ಆಟದಿಂದ ಹಿಂದೆ ಸರಿದರು.
ಅದರಲ್ಲೂ ವಿಶೇಷವಾಗಿ ಗಮನ ಸೆಳೆದವರು ಆಶ್ ಮೆಲೋ ಸ್ಕೈಲರ್ (Ash Melo Skyler). ದುನಿಯಾ ವಿಜಯ್ ನಿರ್ದೇಶನ ಹಾಗೂ ನಟನೆಯ ಭೀಮ ಸಿನಿಮಾದಲ್ಲಿ ನಟಿಸಿದ್ದ ಆಶ್, ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಅವರು ‘ಹಳ್ಳಿ ಪವರ್’ ಶೋದಲ್ಲಿ ಮಿಂಚುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಇತ್ತು. ಆದರೆ ಕೇವಲ ಏಳು ದಿನಗಳಲ್ಲೇ ಅವರು ಶೋ ಬಿಡಲು ನಿರ್ಧರಿಸಿದರು.
ಆರಂಭದಲ್ಲಿ ವೈಯಕ್ತಿಕ ಕಾರಣ ಎಂದಷ್ಟೇ ಹೇಳಿದ್ದ ಆಶ್, ನಂತರ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಆಶ್ ಅವರ ಪೋಸ್ಟ್ನಲ್ಲಿ ಹೀಗೆ ಬರೆದಿದ್ದಾರೆ: “ನಾನು ನನ್ನ ಎಲ್ಲಾ ಪ್ರೇಕ್ಷಕರನ್ನು ಮತ್ತು ಕಾರ್ಯಕ್ರಮದ ವೀಕ್ಷಕರನ್ನು ನಿಜವಾಗಿಯೂ ಗೌರವಿಸುತ್ತೇನೆ. ಆದರೆ ನನ್ನ ಮಾತುಗಳನ್ನು ತಪ್ಪಾಗಿ ತೋರಿಸಲಾಯಿತು. ನಾನು ಶೋ ಹಾಗೂ ಪ್ರೇಕ್ಷಕರ ಬಗ್ಗೆ ಗೌರವದಿಂದಲೇ ಮಾತನಾಡಿದ್ದರೂ, ಅದನ್ನು ಎಡವಟ್ಟಾಗಿ ತೋರಿಸಿ ನನ್ನ ಇಮೇಜ್ಗೆ ಹಾನಿ ಮಾಡಲಾಗಿದೆ. ಅದಕ್ಕಾಗಿಯೇ ನಾನು ಶೋ ತೊರೆಯಲು ನಿರ್ಧರಿಸಿದೆ.” ಈ ಹೇಳಿಕೆಯಿಂದಾಗಿ ಶೋ ತಂಡದ ಮೇಲೆ ಹಲವು ಪ್ರಶ್ನೆಗಳು ಉದ್ಭವಿಸಿವೆ.
ಮಂಗಳೂರಿನ ಸ್ಪರ್ಧಿ ಸ್ನೇಹಾ ಶೆಟ್ಟಿ ವೈಯಕ್ತಿಕ ಕಾರಣ ನೀಡಿ ಹೊರ ನಡೆದಿದ್ದಾರೆ. ಶೋ ಹೋಸ್ಟ್ ಅಕುಲ್ ಬಾಲಾಜಿ, “ಇನ್ನೂ ಯಾರಾದರೂ ಹೊರ ಹೋಗಬೇಕೆಂದು ಬಯಸಿದರೆ ಕೈ ಎತ್ತಿ” ಎಂದಾಗ ಆಶ್ ಕೂಡ ಕೈ ಎತ್ತಿ ನಿರ್ಗಮಿಸಿದರು. ಹಳ್ಳಿ ಜೀವನ ಸುಲಭವಲ್ಲ ಎಂಬುದು ಈ ಶೋ ಮೂಲಕ ಮತ್ತೆ ಸಾಬೀತಾಗಿದೆ. ಶೀತ, ಬಿಸಿಲು, ಶ್ರಮ ಹಾಗೂ ದಿನನಿತ್ಯದ ಸವಾಲುಗಳನ್ನು ಎದುರಿಸಲು ಎಲ್ಲರೂ ಸಿದ್ಧರಿರಲಿಲ್ಲ.
ಆಶ್ ಮೆಲೋ ಸ್ಕೈಲರ್ ಹೊರಹೋದ ವಿಚಾರ ಅಭಿಮಾನಿಗಳಿಗೆ ನಿರಾಶೆ ತಂದಿದೆ. “ಅವರನ್ನು ತಪ್ಪಾಗಿ ತೋರಿಸಿದ್ದಾರೆ” ಎಂಬ ಆಶ್ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸುವವರಿದ್ದಾರೆ. ಮತ್ತೊಂದೆಡೆ, “ಹಳ್ಳಿ ಜೀವನದ ಸವಾಲುಗಳಿಗೆ ಹೊಂದಿಕೊಳ್ಳಲಿಲ್ಲ” ಎಂಬ ಟೀಕೆಗಳೂ ಕೇಳಿಬರುತ್ತಿವೆ. ಒಟ್ಟಿನಲ್ಲಿ, ‘ಹಳ್ಳಿ ಪವರ್’ ಶೋ ಆರಂಭದಿಂದಲೇ ಡ್ರಾಮಾ, ಭಿನ್ನಾಭಿಪ್ರಾಯ ಹಾಗೂ ಅಚ್ಚರಿಯ ನಿರ್ಗಮನಗಳಿಂದ ಸುದ್ದಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೇನು ಸರ್ಪ್ರೈಸ್ಗಳು ಬಾಕಿ ಇವೆ ಎಂಬ ಕುತೂಹಲ ಈಗ ಪ್ರೇಕ್ಷಕರಲ್ಲಿ ಹೆಚ್ಚಿದೆ.
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
