Back to Top

ಸ್ವಾಮಿ ಹತ್ಯೆ ಪ್ರಕರಣದ 3 ಆರೋಪಿಗಳಿಗೆ ಜಾಮೀನು; ಯಾರಿಗೆಲ್ಲ ಸಿಕ್ತು ರಿಲೀಫ್​?

SSTV Profile Logo SStv September 24, 2024
ರೇಣುಕಾಸ್ವಾಮಿ, ದರ್ಶನ್​, ಪವಿತ್ರಾ ಗೌಡ
ರೇಣುಕಾಸ್ವಾಮಿ, ದರ್ಶನ್​, ಪವಿತ್ರಾ ಗೌಡ
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ 3 ಆರೋಪಿಗಳಿಗೆ ಜಾಮೀನು; ಯಾರಿಗೆಲ್ಲ ಸಿಕ್ತು ರಿಲೀಫ್​? ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಸೆಪ್ಟೆಂಬರ್ 23ರಂದು ಜಾಮೀನು ಮಂಜೂರಾಗಿದೆ. ಕೇಶವಮೂರ್ತಿ, ಕಾರ್ತಿಕ್, ಮತ್ತು ನಿಖಿಲ್ ನಾಯಕ್‌ರಿಗೆ ಜಾಮೀನು ಸಿಕ್ಕಿದ್ದು, ಕೇಸಿನ ತನಿಖೆ ಮುಕ್ತಾಯವಾದ ಬಳಿಕ ಈ ನಿರ್ಧಾರ ಬಂದಿದೆ. ಇದಕ್ಕೂ ಮುನ್ನ, ಈ ಮೂವರು ತೀವ್ರ ಆರೋಪಗಳನ್ನು ಎದುರಿಸುತ್ತಿದ್ದು, ತನಿಖಾ ತಂಡವು ಸಾಕ್ಷ್ಯಗಳನ್ನು ಆಧರಿಸಿ ಚಾರ್ಜ್‌ಶೀಟ್ ಸಲ್ಲಿಸಿತ್ತು. Bengaluru ಪೊಲೀಸರು ನಡೆಸಿದ ತನಿಖೆಯು ಅಂತ್ಯಗೊಂಡಿದ್ದು, 57ನೇ ಸಿಸಿಹೆಚ್ ಕೋರ್ಟ್ ಹಾಗೂ ಹೈಕೋರ್ಟ್ ಈ ಮೂವರಿಗೆ ಜಾಮೀನು ನೀಡಿದೆ. ಆದರೆ, ಪವಿತ್ರಾ ಗೌಡ ಹಾಗೂ ದರ್ಶನ್ ಮುಂತಾದ ಆರೋಪಿಗಳು ಇನ್ನೂ ಜಾಮೀನಿಗಾಗಿ ಕಾಯುತ್ತಿದ್ದಾರೆ. ಅವರ ಅರ್ಜಿ ವಿಚಾರಣೆ ಕ್ರಮವಾಗಿ ಸೆಪ್ಟೆಂಬರ್ 25 ಮತ್ತು 27ರಂದು ನಡೆಯಲಿದೆ.