Back to Top

ದರ್ಶನ್ ಪಶ್ಚಾತ್ತಾಪ: ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡುವ ಭರವಸೆ

SSTV Profile Logo SStv September 19, 2024
ದರ್ಶನ್ ಪಶ್ಚಾತ್ತಾಪ
ದರ್ಶನ್ ಪಶ್ಚಾತ್ತಾಪ
ದರ್ಶನ್ ಪಶ್ಚಾತ್ತಾಪ: ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್, ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಪಶ್ಚಾತ್ತಾಪದಿಂದ ಕಾಡುತ್ತಿದ್ದಾರೆ. ಜೈಲು ಸಿಬ್ಬಂದಿಯೊಂದಿಗೆ ಮಾತನಾಡಿದ ದರ್ಶನ್, ಜೈಲಿನಿಂದ ಬಿಡುಗಡೆ ಆದ ನಂತರ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾಗಿ ಸಹಾಯ ಮಾಡುವುದಾಗಿ ಹೇಳಿದ್ದಾರೆ. "ನಾನು ಕೊಲೆ ಮಾಡಿಲ್ಲ, ಏನೋ ಮಾಡಲು ಹೋಗಿ ಏನೋ ಆಯ್ತು" ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲಿ ಸೌಲಭ್ಯಗಳ ಕೊರತೆ ಬಗ್ಗೆ ದರ್ಶನ್ ಮಾನವ ಹಕ್ಕು ಆಯೋಗಕ್ಕೆ ದೂರು ನೀಡುವ ಸಾಧ್ಯತೆ ಇದೆ. ಜೈಲು ಅಧಿಕಾರಿಗಳು ಬೆಡ್, ತಲೆದಿಂಬು ಹಾಗೂ ಚೇರ್ ಬೇಡಿಕೆಯನ್ನು ತಿರಸ್ಕರಿಸಿದ್ದು, ಅವರು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದ್ದಾರೆ.