Back to Top

ರಾಷ್ಟ್ರ ಪ್ರಶಸ್ತಿಯನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ ರಿಷಬ್‌ ಶೆಟ್ಟಿ

SSTV Profile Logo SStv October 10, 2024
ದೈವದ ಪಾದಕ್ಕೆ ಅರ್ಪಿಸುತ್ತೇನೆ ರಿಷಬ್‌ ಶೆಟ್ಟಿ
ದೈವದ ಪಾದಕ್ಕೆ ಅರ್ಪಿಸುತ್ತೇನೆ ರಿಷಬ್‌ ಶೆಟ್ಟಿ
ರಾಷ್ಟ್ರ ಪ್ರಶಸ್ತಿಯನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ ರಿಷಬ್‌ ಶೆಟ್ಟಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇತ್ತೀಚೆಗೆ ‘ಕಾಂತಾರ’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ವಾಪಸ್ಸಾಗಿದ್ದಾರೆ. ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಅವರು ಈ ಪ್ರಶಸ್ತಿಯನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು. ರಿಷಬ್ ಶೆಟ್ಟಿ ಮಾತನಾಡಿ, "ಕಾಂತಾರ" ಸಿನಿಮಾ ದೈವರಾಧನೆ ಮತ್ತು ದೈವ ನರ್ತಕರ ಸಮುದಾಯದ ಬಗ್ಗೆ ಇದೆ. ನ್ಯಾಷನಲ್ ಅವಾರ್ಡ್ ದೈವ ನರ್ತಕರ ಸಮುದಾಯಕ್ಕೆ ಸೇರಬೇಕು ಎಂದರು. ದೈವದ ಆಶೀರ್ವಾದವಿಲ್ಲದೇ ಈ ಮಟ್ಟಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಭಾವೋದ್ವೇಗ ವ್ಯಕ್ತಪಡಿಸಿದರು. "ಕಾಂತಾರ ಚಾಪ್ಟರ್ 1" ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕ ಪ್ರಕಟವಾಗಲಿದೆ ಎಂದ ರಿಷಬ್ ಶೆಟ್ಟಿ, ಈ ಚಿತ್ರವು ಮೊದಲ ಭಾಗಕ್ಕಿಂತ ಹೆಚ್ಚಿನ ಹೆಮ್ಮೆ ತರುವಂತಿದೆ ಎಂದು ಅಭಿಪ್ರಾಯಪಟ್ಟರು.