Back to Top

ದರ್ಶನ್ ನೋಡಲು ಮೊದಲ ಬಾರಿಗೆ ಬಳ್ಳಾರಿ ಜೈಲಿಗೆ ಬಂದ ಪುತ್ರ ವಿನೀಶ್

SSTV Profile Logo SStv October 3, 2024
ಬಳ್ಳಾರಿ ಜೈಲಿಗೆ ಬಂದ ಪುತ್ರ ವಿನೀಶ್
ಬಳ್ಳಾರಿ ಜೈಲಿಗೆ ಬಂದ ಪುತ್ರ ವಿನೀಶ್
ದರ್ಶನ್ ನೋಡಲು ಮೊದಲ ಬಾರಿಗೆ ಬಳ್ಳಾರಿ ಜೈಲಿಗೆ ಬಂದ ಪುತ್ರ ವಿನೀಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ನ್ನು ಭೇಟಿ ಮಾಡಲು ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾರೆ. ಇದು ವಿನೀಶ್ ಮೊದಲ ಬಾರಿಗೆ ತನ್ನ ಅಪ್ಪನನ್ನು ಜೈಲಿನಲ್ಲಿ ಭೇಟಿಯಾದ ಸಂದರ್ಭವಾಗಿತ್ತು. ದರ್ಶನ್ ಜೈಲಿನಲ್ಲಿರುವುದು ಮೂರು ತಿಂಗಳಾದ ನಂತರ, ವಿಜಯಲಕ್ಷ್ಮಿ ಪ್ರತಿವಾರವೂ ದರ್ಶನ್‌ನ್ನು ಭೇಟಿಯಾಗಿ ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚಿಸುತ್ತಿದ್ದರು. ಈ ಬಾರಿ, ಆಕೆಯೊಂದಿಗೆ ಪುತ್ರ ವಿನೀಶ್ ಕೂಡ ಜೈಲಿಗೆ ಬಂದಿದ್ದು, ದರ್ಶನ್‌ನ್ನು ನೋಡಿದ ಬೆನ್ನಲ್ಲೆ, ಮನಸ್ಸು ತಡೆಯದೇ ಬಿಕ್ಕಿ ಅತ್ತ ಎಂದು ವರದಿಯಾಗಿದೆ. ಮಗನನ್ನು ದರ್ಶನ್‌ ಸಾಂತ್ವನ ಹೇಳಿದ ನಂತರ, ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಕಾನೂನು ಸಮರದ ಬಗ್ಗೆ ಚರ್ಚಿಸಿದರು. ದರ್ಶನ್‌ಗಾಗಿ ಅಗತ್ಯವಿರುವ ಬಟ್ಟೆ, ಬೆಡ್‌ಶೀಟ್, ತಿನಿಸುಗಳು ಸೇರಿದಂತೆ ಎರಡು ಬ್ಯಾಗುಗಳನ್ನು ತಂದಿದ್ದರು.