Back to Top

ಶಕ್ತಿಧಾಮದ ಮಕ್ಕಳಿಗೆ ಬದಲಾವಣೆ ತರಲು ಗೀತಾ ಶಿವರಾಜ್ ಕುಮಾರ್ ಅವರ ಶ್ರಮ

SSTV Profile Logo SStv November 7, 2024
ಶಕ್ತಿಧಾಮದ ಮಕ್ಕಳಿಗೆ ಬದಲಾವಣೆ ತರಲು ಗೀತಾ ಶಿವರಾಜ್ ಕುಮಾರ್
ಶಕ್ತಿಧಾಮದ ಮಕ್ಕಳಿಗೆ ಬದಲಾವಣೆ ತರಲು ಗೀತಾ ಶಿವರಾಜ್ ಕುಮಾರ್
ಶಕ್ತಿಧಾಮದ ಮಕ್ಕಳಿಗೆ ಬದಲಾವಣೆ ತರಲು ಗೀತಾ ಶಿವರಾಜ್ ಕುಮಾರ್ ಅವರ ಶ್ರಮ ಪಾರ್ವತಮ್ಮ ರಾಜ್‌ಕುಮಾರ್ ನಿಧನದ ನಂತರ ಶಕ್ತಿಧಾಮದ ಜವಾಬ್ದಾರಿ ವಹಿಸಿಕೊಂಡಿರುವ ಗೀತಾ ಶಿವರಾಜ್ ಕುಮಾರ್, ಅಲ್ಲಿನ ಮಕ್ಕಳಿಗೆ ಕೌಶಲ್ಯ ಶಿಕ್ಷಣ ನೀಡಲು ವಿಶೇಷವಾದ ಮುಂದಾಳತ್ವ ತೋರಿದ್ದಾರೆ. ಮಕ್ಕಳಿಗೆ ಬೇಸಿಗೆಯಲ್ಲಿ ದಿನಗೂಲಿಗೆ ಹೋಗುವುದನ್ನು ತಪ್ಪಿಸಲು, ಗೀತಾ ಅವರು ಬೇಕಿಂಗ್ ಕಲಿಸಲು ಪ್ರಾರಂಭಿಸಿದ್ದಾರೆ. ಬೇಸಿಗೆಯ ರಜೆಯಲ್ಲಿ ಮಕ್ಕಳಿಗೆ ಬೇಕಿಂಗ್‌ ತರಗತಿಗಳನ್ನು ಆರಂಭಿಸಿರುವ ಗೀತಾ, ಏಳರಿಂದ ಹತ್ತನೇ ತರಗತಿವರೆಗೆ ಇರುವ ವಿದ್ಯಾರ್ಥಿಗಳಿಗೆ ಈ ಕೌಶಲ್ಯವನ್ನು ಕಲಿಸುತ್ತಿದ್ದಾರೆ. ಈ ತರಬೇತಿ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಿದ್ದು, ಕೆಲವು ಹಿರಿಯ ಮಕ್ಕಳಿಗೆ ಈಗಾಗಲೇ 20-25 ಸಾವಿರ ಸಂಬಳದ ಆಫರ್‌ಗಳೂ ಲಭಿಸುತ್ತಿವೆ. ಈ ಬೇಕರಿ ಪದಾರ್ಥಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡಲು ಗೀತಾ ಯೋಚನೆ ನಡೆಸಿದ್ದು, ಆ ಆದಾಯವನ್ನು ಶಕ್ತಿಧಾಮದ ಮಕ್ಕಳ ಕಲ್ಯಾಣಕ್ಕಾಗಿ ಬಳಸುವ ಉದ್ದೇಶವಿದೆ.