Back to Top

ಜಗ್ಗುದಾದಾ ಡೈರೆಕ್ಟರ್ vs ಧ್ರುವ ಸರ್ಜಾ – ಪ್ಯಾನ್ ಇಂಡಿಯಾ ಸಿನಿಮಾ ವಿವಾದ ತೀವ್ರ!

SSTV Profile Logo SStv August 11, 2025
ಧ್ರುವ ಬಳಗದ ಆರೋಪಕ್ಕೆ ನಿರ್ದೇಶಕ ರಾಘವೇಂದ್ರ ಹೆಗಡೆ ಸ್ಪಷ್ಟನೆ
ಧ್ರುವ ಬಳಗದ ಆರೋಪಕ್ಕೆ ನಿರ್ದೇಶಕ ರಾಘವೇಂದ್ರ ಹೆಗಡೆ ಸ್ಪಷ್ಟನೆ

ವಿವಾದ ಇದೀಗ ಚರ್ಚೆಗೆ ಕಾರಣವಾಗಿದೆ. ಎಂಟು ವರ್ಷಗಳ ಹಿಂದೆ ಸೈನ್ ಮಾಡಿದ ಒಪ್ಪಂದದ ಪ್ರಕಾರ ಸಿನಿಮಾ ಇಂದಿಗೂ ಪ್ರಾರಂಭವಾಗದೆ ಇರುವುದರಿಂದ, ಧ್ರುವ ಸರ್ಜಾ ವಿರುದ್ಧ ವಂಚನೆ ಪ್ರಕರಣ ಮುಂಬೈನ ಆಂಬೋಳಿ ಠಾಣೆಯಲ್ಲಿ ದಾಖಲಾಗಿದೆ.

ಈ ಬಗ್ಗೆ ಧ್ರುವ ಸರ್ಜಾ ಬಳಗದಿಂದ, ರಾಘವೇಂದ್ರ ಹೆಗಡೆ ಕನ್ನಡಕ್ಕೆ ಆದ್ಯತೆ ನೀಡದೇ ತಮಿಳು-ತೆಲುಗು ಸಿನಿಮಾಗೆ ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ತೀವ್ರ ಪ್ರತಿಕ್ರಿಯಿಸಿದ ರಾಘವೇಂದ್ರ ಹೆಗಡೆ, “ನಾನು ಜಗ್ಗುದಾದಾ ಸಿನಿಮಾ, ಶನಿ, ಮಹಾಕಾಳಿ ಸೀರಿಯಲ್‌ಗಳನ್ನು ಕನ್ನಡದಲ್ಲೇ ಮಾಡಿದ್ದೇನೆ. ಎರಡನೇ ಸಿನಿಮಾ ಧ್ರುವ ಸರ್ಜಾ ಅವರಿಗೆ ಮಾಡಬೇಕೆಂದಿದ್ದೆ. ಅವರು ಪ್ಯಾನ್ ಇಂಡಿಯಾ ಮಾಡಲು ಬಯಸಿದ್ದರಿಂದ 8 ವರ್ಷ ಕಾದೆ. ಹಣ ವಾಪಸ್ ಕೇಳಿದಾಗ ನೋಟಿಸ್ ಕಳಿಸಿದ್ದೇನೆ” ಎಂದಿದ್ದಾರೆ.

ತಮಿಳು ಅಥವಾ ತೆಲುಗು ಸಿನಿಮಾ ಮಾಡುವ ಉದ್ದೇಶವಿದ್ದರೆ ಆ ಭಾಷೆಯ ನಟರೊಂದಿಗೆ ಕೆಲಸ ಮಾಡುತ್ತಿದ್ದೆನೆಂದು ಅವರು ಸ್ಪಷ್ಟಪಡಿಸಿ, “ನಾನು ಕರಾವಳಿಯವನು, ನನ್ನ ಮಾತೃಭಾಷೆ ಕನ್ನಡ” ಎಂದು ತಿರುಗೇಟು ನೀಡಿದ್ದಾರೆ.