Back to Top

ಹೈಕೋರ್ಟ್​ನಲ್ಲಿ ದರ್ಶನ್ ತೂಗುದೀಪ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

SSTV Profile Logo SStv October 22, 2024
ದರ್ಶನ್ ತೂಗುದೀಪ ಜಾಮೀನು ಅರ್ಜಿ ಮುಂದೂಡಿಕೆ
ದರ್ಶನ್ ತೂಗುದೀಪ ಜಾಮೀನು ಅರ್ಜಿ ಮುಂದೂಡಿಕೆ
ಹೈಕೋರ್ಟ್​ನಲ್ಲಿ ದರ್ಶನ್ ತೂಗುದೀಪ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ಹೈಕೋರ್ಟ್​ನಲ್ಲಿ ಇಂದು (ಅ. 22) ವಿಚಾರಣೆಗೆ ಬಂದಿತ್ತು. ಸಿವಿ ನಾಗೇಶ್ ಅವರ ವಾದದೊಂದಿಗೆ, ದರ್ಶನ್ ಅವರ ಆರೋಗ್ಯದ ಕುರಿತು ಜೈಲಾಧಿಕಾರಿಗಳ ವರದಿ ಕೇಳಿ, ನ್ಯಾಯಮೂರ್ತಿಗಳು ವಿಚಾರಣೆಯನ್ನು ಅ. 28ಕ್ಕೆ ಮುಂದೂಡಿದರು. ದರ್ಶನ್ ಅವರು ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದೆ. ಬಳ್ಳಾರಿ ಜೈಲಿನ ಅಧಿಕಾರಿಗಳು ದರ್ಶನ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವರದಿ ಸಲ್ಲಿಸಬೇಕಿದ್ದು, ಅದರ ಆಧಾರದ ಮೇಲೆ ಜಾಮೀನು ನೀಡುವ ನಿರ್ಧಾರವಾಗಲಿದೆ.