Back to Top

ಉಡುಪಿಯಲ್ಲಿ ಕಂಬಳ ತಂಡದೊಂದಿಗೆ ಒಂದು ತಿಂಗಳು ಬೀಡು ಬಿಟ್ಟ ಪ್ರಜ್ವಲ್ ದೇವರಾಜ್

SSTV Profile Logo SStv December 6, 2024
ಉಡುಪಿಯಲ್ಲಿ ಒಂದು ತಿಂಗಳು ಬೀಡು ಬಿಟ್ಟ ಪ್ರಜ್ವಲ್ ದೇವರಾಜ್
ಉಡುಪಿಯಲ್ಲಿ ಒಂದು ತಿಂಗಳು ಬೀಡು ಬಿಟ್ಟ ಪ್ರಜ್ವಲ್ ದೇವರಾಜ್
ಉಡುಪಿಯಲ್ಲಿ ಕಂಬಳ ತಂಡದೊಂದಿಗೆ ಒಂದು ತಿಂಗಳು ಬೀಡು ಬಿಟ್ಟ ಪ್ರಜ್ವಲ್ ದೇವರಾಜ್ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಹೊಸ ಸಿನಿಮಾ 'ಕರಾವಳಿ' ದಕ್ಷಿಣ ಕನ್ನಡದ ಹಸಿರು ಕರಾವಳಿ ಪ್ರದೇಶ ಮತ್ತು ಅದರ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ತೆರೆಮೇಲೆ ತರುತ್ತಿದೆ. ಕಂಬಳದ ಸೀಸನ್ ಆರಂಭವಾಗಿದ್ದರಿಂದ, ಪ್ರಜ್ವಲ್ ದೇವರಾಜ್ ಹಾಗೂ ಚಿತ್ರತಂಡ ಈಗ ಉಡುಪಿಯಲ್ಲಿ ಕಂಬಳದ ದೃಶ್ಯಗಳನ್ನು ಚಿತ್ರೀಕರಣ ಮಾಡುತ್ತಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಕಂಬಳದ ಸೀನ್‌ಗಳಿಗಾಗಿ ಒಂದು ತಿಂಗಳ ಕಾಲ ಉಡುಪಿಯಲ್ಲಿ ಬೀಡು ಬಿಟ್ಟಿದ್ದಾರೆ. ಈ ಸಂದರ್ಭ ಪ್ರಜ್ವಲ್ ಹಾಗೂ ನಾಯಕಿ ಸಂಪದಾ ಮೊದಲ ಬಾರಿಗೆ ಕಂಬಳವನ್ನು ವೀಕ್ಷಿಸಿ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ. ನಿರ್ದೇಶಕ ಗುರುದತ್ ಗಾಣಿಗ ಅವರ ಈ ನಿರ್ದೇಶನವು ಪ್ರಜ್ವಲ್ ಅವರ ವೃತ್ತಿ ಬದುಕಿಗೆ ವಿಶಿಷ್ಟ ಕೊಡುಗೆಯಾಗಲಿದೆ. 'ಕರಾವಳಿ' ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷವನ್ನು ಆಧರಿಸಿದ ಕಥೆಯನ್ನು ಹೊಂದಿದ್ದು, 2025ರಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಇದರಿಂದಾಗಿ ಪ್ರಜ್ವಲ್ ದೇವರಾಜ್ ಅವರ 'ಮಾಫಿಯಾ' ಮತ್ತು 'ಗಾನಾ' ಚಿತ್ರಗಳೂ ಸಹ ಬ್ಯಾಕ್-ಟು-ಬ್ಯಾಕ್ ಬಿಡುಗಡೆಯಾಗುವ ನಿರೀಕ್ಷೆಯಿದೆ. 'ಕರಾವಳಿ' ಚಿತ್ರವು ಸಾಂಸ್ಕೃತಿಕ ಛಾಯೆಯೊಂದಿಗೆ ಪ್ರಜ್ವಲ್ ಅವರಿಗೂ, ಕನ್ನಡ ಚಿತ್ರರಂಗಕ್ಕೂ ವಿಶೇಷ ಪ್ರದರ್ಶನ ನೀಡಲಿದೆ.