ಅಣ್ಣಾವ್ರ ಹಾದಿಯಲ್ಲೇ ಸರೋಜಾ ದೇವಿ: ನೇತ್ರದಾನ ಮಾಡಿ ಸಾರ್ಥಕತೆ ಮೆರೆದ 'ಅಭಿನಯ ಸರಸ್ವತಿ'


ಕನ್ನಡ ಚಿತ್ರರಂಗದ ಹಿರಿಯ ನಟಿ, ಬಹುಭಾಷಾ ತಾರೆ ಬಿ. ಸರೋಜಾ ದೇವಿ ಅವರು ನಿಧನ ಹೊಂದಿದ ನಂತರವೂ ತಮ್ಮ ಬದುಕಿಗೆ ಸಾರ್ಥಕತೆ ನೀಡಿದ್ದಾರೆ. ಅವರು ದಾನಮಾಡಿದ ನೇತ್ರಗಳು ಈಗ ಇಬ್ಬರು ಅಂಧರಿಗೆ ಬೆಳಕು ನೀಡಲಿವೆ. ಇದು ‘ಅಭಿನಯ ಸರಸ್ವತಿ’ ಎಂದೇ ಖ್ಯಾತರಾದ ಅವರಿಂದ ಸಮಾಜಿಕ ಪ್ರತಿಬದ್ಧತೆಯ ಅಪೂರ್ವ ಉದಾಹರಣೆ.
ಸಾವಿನಲ್ಲೂ ಜೀವಂತತೆ ಮೆರೆದ ನಾಯಕಿ, ಜುಲೈ 14, 2024ರ ಬೆಳಗ್ಗೆ 8.00 ಗಂಟೆಗೆ ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ 87ನೇ ವಯಸ್ಸಿನಲ್ಲಿ ಸರೋಜಾದೇವಿ ವಿಧಿವಶರಾದರು. ಆದರೆ, ಸಾವಿನ ನಂತರವೂ ಅವರು ಮಾಡಿದ ನೇತ್ರದಾನ, ಸಾವಿರಾರು ಅಂಧರಿಗೆ ನಂಬಿಕೆಯ ಬೆಳಕು ನೀಡುತ್ತದೆ. ಈ ಕಣ್ಣುಗಳನ್ನು ನಾರಾಯಣ ನೇತ್ರಾಲಯದ ವೈದ್ಯರು ಪಡೆದು ಆಪ್ತ ಚಿಕಿತ್ಸೆಗೆ ಮುಂದಾಗಿದ್ದಾರೆ.
ಡಾ. ರಾಜ್ಕುಮಾರ್ ಹಾದಿಯತ್ತ ಒಂದು ಹೆಜ್ಜೆ, ವರನಟ ಡಾ. ರಾಜ್ ಕುಮಾರ್ ಅವರು ನೇತ್ರದಾನ ಮಾಡಿದ ನಂತರ ಹಲವರು ಈ ನಿಟ್ಟಿನಲ್ಲಿ ಮುಂದಾಗಿದ್ದರು. ಈಗ ಸರೋಜಾದೇವಿಯವರು ಕೂಡ ಅಣ್ಣಾವ್ರ ಹಾದಿ ಅನುಸರಿಸಿದ್ದಾರೆ. ಅವರ ಈ ಕೃತಿ, ಸಮಾಜದಲ್ಲಿ ನೇತ್ರದಾನ ಕುರಿತ ಜಾಗೃತಿ ಮೂಡಿಸಲು ಬಹುಮಟ್ಟಿಗೆ ಸಹಕಾರಿಯಾಗಲಿದೆ. 1938ರ ಜನವರಿ 7ರಂದು ಬೆಂಗಳೂರಿನಲ್ಲಿ ಜನಿಸಿದ ಬಿ. ಸರೋಜಾದೇವಿ ಅವರು 1955ರ 'ಮಹಾಕವಿ ಕಾಳಿದಾಸ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 60 ವರ್ಷಗಳ ಕಾಲ ನೂರಾರು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ, ಭಾರತೀಯ ಚಿತ್ರರಂಗದ ಪ್ರಥಮ ಲೇಡಿ ಸೂಪರ್ಸ್ಟಾರ್ ಎಂಬ ಬಿರುದನ್ನು ಗಳಿಸಿದರು.
ಅಭಿನಯ ಸರಸ್ವತಿಯ ಅಂತ್ಯಸಂಸ್ಕಾರವನ್ನು ಜುಲೈ 15ರಂದು, ಚನ್ನಪಟ್ಟಣ ತಾಲೂಕಿನ ಕಣ್ವ ಡ್ಯಾಂ ಹತ್ತಿರದ ತಮ್ಮ ತೋಟದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿಸಲಾಗುತ್ತಿದೆ. ಚಿತ್ರರಂಗದ ಗಣ್ಯರು, ಅಭಿಮಾನಿಗಳು, ರಾಜಕಾರಣಿಗಳು ಪಾರ್ಥಿವ ದರ್ಶನ ಪಡೆದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಬಿ. ಸರೋಜಾದೇವಿಯವರು ತಮ್ಮ ಸಾವಿನಲ್ಲೂ ಒಂದು ಪಾಠ ಬೋಧಿಸಿದ್ದಾರೆ – ‘ಇಹಲೋಕವನ್ನು ಬಿಟ್ಟು ಹೋಗುವಾಗ, ಕಣ್ಣಿನ ರೂಪದಲ್ಲಾದರೂ ಇತರರ ಬದುಕಿಗೆ ಬೆಳಕು ನೀಡಬಹುದು’. ಅವರ ಈ ಹಾದಿಯು ಇನ್ನಷ್ಟು ಮಂದಿ ನೇತ್ರದಾನ ಮಾಡಲು ಪ್ರೇರಣೆ ನೀಡಲಿ ಎಂಬ ಆಶಯವೇ ಅವರ ಸಾರ್ಥಕ ಸಂಸ್ಕಾರಕ್ಕೆ ಸೂಕ್ತ ಶ್ರದ್ಧಾಂಜಲಿ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
