‘ನೋಡಿದವರು ಏನಂತಾರೆ’ ನವೀನ್ ಶಂಕರ್ ಹೊಸ ಪ್ರಯತ್ನ


‘ನೋಡಿದವರು ಏನಂತಾರೆ’ ನವೀನ್ ಶಂಕರ್ ಹೊಸ ಪ್ರಯತ್ನನವೀನ್ ಶಂಕರ್ ಮತ್ತು ಅಪೂರ್ವ ಭಾರದ್ವಾಜ್ ನಾಯಕ, ನಾಯಕಿಯಾಗಿ ನಟಿಸಿರುವ ‘ನೋಡಿದವರು ಏನಂತಾರೆ’ ಸಿನೆಮಾ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸಿದೆ. ಕುಲದೀಪ್ ಕಾರಿಯಪ್ಪ ಬರೆದು ನಿರ್ದೇಶಿಸಿರುವ ಈ ಚಿತ್ರ, ನಾಗೇಶ್ ಗೋಪಾಲ್ ಅವರ ನಿರ್ಮಾಣದಲ್ಲಿ ಮೂಡಿ ಬಂದಿದೆ.
ಜೀವನದ ಅಸ್ತಿತ್ವ, ಪ್ರೀತಿ, ಆತ್ಮಾವಲೋಕನ, ಮತ್ತು ಬಾಂಧವ್ಯಗಳ ಸುತ್ತ ನೋಡಿದವರು ಏನಂತಾರೆ ಎಂಬ ಕಥೆಯು ಅಭೂತಪೂರ್ವ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. ಆಶ್ವಿನ್ ಕೆನೆಡಿ ಅವರ ಛಾಯಾಗ್ರಹಣ, ಮಯೂರೆಶ್ ಅಧಿಕಾರಿ ಅವರ ಸಂಗೀತ, ಮತ್ತು ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಚಿತ್ರಕ್ಕೆ ಆಕರ್ಷಣೆ ಹೆಚ್ಚಿಸಿದೆ.
ಹೊಯ್ಸಳ ಮತ್ತು ಕ್ಷೇತ್ರಪತಿ ಚಿತ್ರದ ಯಶಸ್ಸಿನ ನಂತರ, ನವೀನ್ ಶಂಕರ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆಯಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೊಸ ಅನುಭವ ನೀಡುವ ಈ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
