Back to Top

'ಮನದ ಕಡಲು' ಮುಂಗಾರು ಮಳೆ ತಂಡದ ಹೊಸ ರೊಮ್ಯಾಂಟಿಕ್ ಸಿನಿಮಾ ಮುಂಗಾರು ಮಳೆ ನಂತರ 18 ವರ್ಷಗಳ ಬಳಿಕ, ನಿರ್ದೇಶಕ ಯೋಗರಾಜ್ ಭಟ್

SSTV Profile Logo SStv November 28, 2024
ಮನದ ಕಡಲು ಹೊಸ ರೊಮ್ಯಾಂಟಿಕ್ ಸಿನಿಮಾ
ಮನದ ಕಡಲು ಹೊಸ ರೊಮ್ಯಾಂಟಿಕ್ ಸಿನಿಮಾ
'ಮನದ ಕಡಲು' ಮುಂಗಾರು ಮಳೆ ತಂಡದ ಹೊಸ ರೊಮ್ಯಾಂಟಿಕ್ ಸಿನಿಮಾ ಮುಂಗಾರು ಮಳೆ ನಂತರ 18 ವರ್ಷಗಳ ಬಳಿಕ, ನಿರ್ದೇಶಕ ಯೋಗರಾಜ್ ಭಟ್ ಮತ್ತು ನಿರ್ಮಾಪಕ ಇ. ಕೃಷ್ಣಪ್ಪ ಹೊಸ ಚಿತ್ರ 'ಮನದ ಕಡಲು' ಮೂಲಕ ಮತ್ತೆ ಜೋಡಿಯಾಗಿದ್ದಾರೆ. ಈ ತ್ರಿಕೋನ ಪ್ರೇಮಕಥೆಯ ಚಿತ್ರದಲ್ಲಿ ಸುಮುಖ್ ನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದು, ಇಬ್ಬರು ನಾಯಕಿಯರು ನಟಿಸುತ್ತಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ ನೀಡಿದ್ದು, ಚಿತ್ರ ಬೃಹತ್ ಮಟ್ಟದಲ್ಲಿ ಚಿತ್ರೀಕರಿಸಲಾಗಿದೆ. ಬೆಂಗಳೂರು, ಮಂಗಳೂರು ಹಾಗೂ ಮಹಾರಾಷ್ಟ್ರದಲ್ಲಿ ಚಿತ್ರೀಕರಣ ಮುಗಿದಿದೆ. ವೈದ್ಯನೊಬ್ಬನ ಪ್ರೇಮಕಥೆಯೆ ಆಧಾರಿತ ಈ ಚಿತ್ರ ಭಟ್ಟರ ಹಳೇ ಶೈಲಿಯ ರೊಮ್ಯಾಂಟಿಕ್ ಸ್ಟೈಲ್‌ನಲ್ಲಿ ಮೂಡಿ ಬರಲಿದೆ. 'ಮನದ ಕಡಲು' ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಭಟ್ಟರಿಂದ ಮತ್ತೊಮ್ಮೆ ಮಾಯಾಜಾಲಕ್ಕೆ ತಯಾರಿ!