Back to Top

'ಕೊತ್ತಲವಾಡಿ' ಸಿನಿಮಾದಲ್ಲಿ ಯಶ್ ಸರ್ಪ್ರೈಸ್ ಎಂಟ್ರಿ! – ಕೊತ್ತಲವಾಡಿ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ ಹೇಳಿಕೆ

SSTV Profile Logo SStv July 24, 2025
'ಕೊತ್ತಲವಾಡಿ' ಸಿನಿಮಾದಲ್ಲಿ ಯಶ್ ಸರ್ಪ್ರೈಸ್ ಎಂಟ್ರಿ!
'ಕೊತ್ತಲವಾಡಿ' ಸಿನಿಮಾದಲ್ಲಿ ಯಶ್ ಸರ್ಪ್ರೈಸ್ ಎಂಟ್ರಿ!

ನಿರ್ಮಾಪಕಿ ಹಾಗೂ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಹೊಸ ಸಿನಿಮಾ 'ಕೊತ್ತಲವಾಡಿ' ಆಗಸ್ಟ್ 1ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಸಂದರ್ಭದಲ್ಲಿ ಪುಷ್ಪಲತಾ ಮಾತನಾಡುತ್ತ, “ನಮ್ಮ ಮಗ ಯಶ್‌ನೇ ನಮ್ಮ ಸ್ಪೂರ್ತಿ. ಅವನ ಶ್ರಮ, ಸಾಧನೆ ನಮಗೆ ಉದಾಹರಣೆ” ಎಂದು ಹೇಳಿದ್ದಾರೆ.

ಕೊತ್ತಲವಾಡಿ ಒಂದು ಹಳ್ಳಿಯಲ್ಲಿ ನಡೆಯುವ ಕಥೆ ಹೊಂದಿದ್ದು, ಇದಕ್ಕೂ ಮುಂಚೆ ಯಶ್ ಅಭಿನಯಿಸಿದ್ದ ಕಿರಾತಕ ಸಿನಿಮಾವನ್ನು ನೆನಪಿಸುವಂತಿದೆ. ಸಿನಿಪ್ರೇಮಿಗಳು ಈ ಹೊಸ ಸಿನಿಮಾ ಕೂಡಾ ತೀವ್ರ ನಿರೀಕ್ಷೆಯಲ್ಲಿದ್ದಾರೆ.

ಚಿತ್ರದಲ್ಲಿ ಸರ್ಪ್ರೈಸ್ ಎಲೆಮೆಂಟ್‌ನಾಗಿಯೇ, ನಾಯಕಿ ಕಾವ್ಯ ಶೈವ ಯಶ್ ಅವರ ಅಭಿಮಾನಿಯಾಗಿ ಕಾಣಿಸಲಿದ್ದು, ಚಿತ್ರದ ಕೆಲ ದೃಶ್ಯಗಳಲ್ಲಿ ಯಶ್ ಅವರ ಹಿಂದಿನ ಸಿನಿಮಾದ ದೃಶ್ಯಗಳನ್ನು ಬಳಸಲಾಗಿದೆ. ನಿರ್ದೇಶಕ ಅವರ ಈ ಆಯ್ಕೆ ಹೊಸತಾಗಿದ್ದು, ಯಶ್ ಅಭಿಮಾನಿಗಳಿಗೆ ಖುಷಿಯ ಸಂಗಾತಿಯಾಗಿದೆ. ಚಿತ್ರದ ನಂತರ, ಪುಷ್ಪಲತಾ ನಟ ಶರಣ್ ಅವರಿಗೂ ಸಿನಿಮಾ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.