Back to Top

ಕೊಲೆ ಪ್ರಕರಣ: ಇಂದು ದರ್ಶನ್‌ಗೆ ಚಾಲೆಂಜಿಂಗ್ ಡೇ – ಸುಪ್ರೀಂ ತೀರ್ಪು ನಿರ್ಣಾಯಕ!

SSTV Profile Logo SStv July 22, 2025
ಇಂದು ದರ್ಶನ್​ಗೆ ಬಿಗ್ ಚಾಲೆಂಜ್
ಇಂದು ದರ್ಶನ್​ಗೆ ಬಿಗ್ ಚಾಲೆಂಜ್

ಸ್ಯಾಂಡಲ್‌ವುಡ್‌ನ ಖ್ಯಾತ ನಟ ದರ್ಶನ್ ಪಾಲಿಗೆ ಇಂದು ಬಹುಮುಖ್ಯ ದಿನ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್, ಈಗ ಥೈಲ್ಯಾಂಡ್‌ನಲ್ಲಿ 'ಡೆವಿಲ್' ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ನಡುವೆ, ಸುಪ್ರೀಂ ಕೋರ್ಟ್‌ನಲ್ಲಿ ಅವರ ಜಾಮೀನು ರದ್ದತಿ ಅರ್ಜಿ ವಿಚಾರಣೆಯ ತೀರ್ಪು ಹೊರಬೀಳಲಿದೆ.

ಈ ಹಿಂದೆ ಹೈಕೋರ್ಟ್ ನೀಡಿದ ಜಾಮೀನಿಗೆ ಪೊಲೀಸರು ವಿರೋಧ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತು ಇಂದು ತೀರ್ಪು ನಿರೀಕ್ಷಿಸಲಾಗಿದೆ. ತೀರ್ಪು ದರ್ಶನ್ ಪರವಾಗಿದ್ರೆ ಅವರು ಶೂಟಿಂಗ್ ಮುಂದುವರಿಸಬಹುದು, ಆದರೆ ಜಾಮೀನು ರದ್ದಾದರೆ, ದರ್ಶನ್ ಸೇರಿದಂತೆ A1 ಪವಿತ್ರ, A2 ದರ್ಶನ್ ಸೇರಿದಂತೆ 7 ಮಂದಿಗೆ ಮತ್ತೆ ಜೈಲುಮುಖವಾಗುವ ಅಪಾಯವಿದೆ.

ಇದೀಗ 'ಡೆವಿಲ್' ಸಿನಿಮಾ ಸೆಪ್ಟೆಂಬರ್ 25ರಂದು ಬಿಡುಗಡೆಯಾಗಬೇಕೆಂಬ ನಿರೀಕ್ಷೆಯಿದೆ. ಇತ್ತ ತೀರ್ಪು ವಿರೋಧಿಯಾಗಿದ್ರೆ, ಚಿತ್ರದ ಬಿಡುಗಡೆಗೂ ಅಡೆತಡೆಯಾಗುವ ಸಂಭವ ಇದೆ. ನಿಜಕ್ಕೂ, ಇದು ಚಾಲೆಂಜಿಂಗ್ ಸ್ಟಾರ್‌ಗಾಗಿ ರಿಯಲ್ ಚಾಲೆಂಜಿಂಗ್ ದಿನವಾಗಲಿದೆ.