ದರ್ಶನ್-ಪವಿತ್ರಾ ಲಿವ್ ಇನ್ ರಿಲೇಷನ್ ಶಿಪ್ನಲ್ಲಿದ್ದರು – ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಭಾರಿ ವಾದ


ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಪವಿತ್ರಾ ಗೌಡ ವಿರುದ್ಧದ ಆರೋಪಗಳು ಮತ್ತಷ್ಟು ಗಂಭೀರವಾದ ರೂಪ ಪಡೆದುಕೊಂಡಿವೆ. ಸುಪ್ರೀಂ ಕೋರ್ಟ್ ಮುಂದೆ ನಡೆದ ವಿಚಾರಣೆಯಲ್ಲಿ ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು ಪ್ರಕರಣದ ಇಂಚಿಂಚು ವಿವರಗಳನ್ನು ಮಂಡಿಸಿದರು. ಪವಿತ್ರಾ ಗೌಡ ಮತ್ತು ದರ್ಶನ್ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು ಎಂಬ ಮಾಹಿತಿಯನ್ನು ಲೂಥ್ರಾ ಬಹಿರಂಗಪಡಿಸಿದ್ದು, ಈ ಸಂಬಂಧದಲ್ಲಿಯೇ ರೇಣುಕಾಸ್ವಾಮಿ ಅಸಭ್ಯ ಮೆಸೇಜ್ ಕಳುಹಿಸಿದ್ದರಿಂದ ಪವಿತ್ರಾ ಮತ್ತು ದರ್ಶನ್ ಆಕ್ರೋಶಗೊಂಡು ಹತ್ಯೆಗೆ ತಿರುಗಿದ್ದಾರೆ ಎಂದು ಕೋರ್ಟ್ಗೆ ತಿಳಿಸಿದರು.
ಹತ್ಯೆಯು ಉದ್ದೇಶಿತವಾಗಿದ್ದು, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್ ಮಾಡಿ ಬೆಂಗಳೂರಿನ ಪಟ್ಟಣಗೆರೆ ಶೆಡ್ಗೆ ಕರೆತರಲಾಗಿದೆ. ಅಲ್ಲದೆ, ಕಬ್ಬಿಣದ ರಾಡ್, ಕೋಲು ಮತ್ತು ವಿದ್ಯುತ್ ಶಾಕ್ ಬಳಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಘಟನೆಯ ಸಿಸಿಟಿವಿ ದೃಶ್ಯಗಳು, ಡಿಜಿಟಲ್ ಪುರಾವೆಗಳು, ದೂರವಾಣಿ ಸಂಭಾಷಣೆಗಳು, ಮತ್ತು ಡಿಎನ್ಎ ರಿಪೋರ್ಟ್ಗಳು ಹತ್ಯೆ ಘಟನೆಯನ್ನು ಬಲಪಡಿಸುತ್ತವೆ. ವೈಜ್ಞಾನಿಕ ತನಿಖೆಯಲ್ಲಿ ಪವಿತ್ರಾ ಗೌಡ ಚಪ್ಪಲಿಯಿಂದ ಹೊಡೆದಿರುವುದು, ದರ್ಶನ್ ಎದೆಗೆ ಒದ್ದಿರುವುದು, ಹಾಗೂ ಹತ್ಯೆಯ ನಂತರ ಫೋಟೋ ತೆಗೆದು ಪವಿತ್ರಾಗೆ ಕಳುಹಿಸಿ ಬಳಿಕ ಡಿಲೀಟ್ ಮಾಡಿದ ಮಾಹಿತಿ ಕೂಡ ಲಭ್ಯವಿದೆ. ಹತ್ಯೆಯ 3 ನಿಮಿಷದ ವಿಡಿಯೋ, ರಕ್ತದ ಕಲೆಗಳಿರುವ ಲಾಠಿ, ಬಟ್ಟೆ, ಇವುಗಳಲ್ಲೂ ನಿಖರ ಪುರಾವೆಗಳಿವೆ ಎಂದು ಲೂಥ್ರಾ ವಿವರಿಸಿದರು.
ಜಾಮೀನಿನಲ್ಲಿ ಹೊರಬಂದ ದರ್ಶನ್, ಆಸ್ಪತ್ರೆಗೆ ಹೋಗುವ ಬದಲು ಶೂಟಿಂಗ್, ವಿದೇಶ ಪ್ರವಾಸ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತೊಡಗಿರುವುದರ ವಿರುದ್ಧವೂ ಪ್ರಶ್ನೆ ಎತ್ತಲಾಗಿದೆ. ಇನ್ನೂ ಚಾರ್ಜ್ ಶೀಟ್ ಫೈಲ್ ಆಗಿಲ್ಲದಿದ್ದರೂ, ಸಾಕಷ್ಟು ಪುರಾವೆಗಳಿವೆ ಎಂದು ವಕೀಲರು ತಿಳಿಸಿದರು. ಈ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಹೊರಬರಬೇಕಿದೆ, ಆದರೆ ಪ್ರಕರಣದ ಗಂಭೀರತೆಗೆ ತಕ್ಕಂತೆ ಜಾಮೀನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಬಲವಾಗಿ ವಾದಿಸಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ತೀವ್ರ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
