Back to Top

ದರ್ಶನ್ ಹೆಸರಲ್ಲಿ ಪವಿತ್ರಾ ತಾಯಿ ದೇವಾಲಯದಲ್ಲಿ ಅರ್ಚನೆ

SSTV Profile Logo SStv December 17, 2024
ದರ್ಶನ್ ಹೆಸರಲ್ಲಿ ಅರ್ಚನೆ
ದರ್ಶನ್ ಹೆಸರಲ್ಲಿ ಅರ್ಚನೆ
ದರ್ಶನ್ ಹೆಸರಲ್ಲಿ ಪವಿತ್ರಾ ತಾಯಿ ದೇವಾಲಯದಲ್ಲಿ ಅರ್ಚನೆ ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಪವಿತ್ರಾ ಗೌಡ, ತಲಘಟ್ಟಪುಪುರದ ವಜ್ರ ಮುನೇಶ್ವರ ದೇವಸ್ಥಾನಕ್ಕೆ ತಾಯಿ ಜೊತೆ ಭೇಟಿ ನೀಡಿದರು. 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ಪವಿತ್ರಾ, ಮನೆ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ಪವಿತ್ರಾ ತಾಯಿ ದರ್ಶನ್ ಹೆಸರಿನಲ್ಲಿ ಭಾಗ್ಯ ಅರ್ಚನೆ ಮಾಡಿಸಿದ್ದು, ನಟಿ ಪವಿತ್ರಾ ದೇವಾಲಯದಲ್ಲಿ ಕಣ್ಣೀರು ಹಾಕಿದರು. ಪೂಜೆಯ ನಂತರ, ಪವಿತ್ರಾ ಗೌಡ ಕುಟುಂಬವು ತಮ್ಮ ಆರ್‌ಆರ್ ನಗರ ನಿವಾಸದತ್ತ ತೆರಳಿತು.