'ಚಿತ್ರರಂಗಕ್ಕೆ ಹಣಕ್ಕಾಗಿ ಅಲ್ಲ, ಹೃತ್ಪೂರ್ವಕ ಉದ್ದೇಶದಿಂದ ಬಂದಿದ್ದೇನೆ’ – ಯಶ್ ತಾಯಿ ಪುಷ್ಪಾ ಹೇಳಿಕೆ


ಅಭಿಮಾನಿಗಳ ಮೆಚ್ಚಿಗೆಗೆ ಪಾತ್ರವಾದ "ಕೊತ್ತಲವಾಡಿ" ಚಿತ್ರದ ಯಶಸ್ಸಿನಿಂದ ಖುಷಿಯಾಗಿರುವ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್, ಚಲನಚಿತ್ರರಂಗದಲ್ಲಿ ಶಾಶ್ವತವಾಗಿ ತಾವು ಉಳಿಯಲಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ. ಪುಷ್ಪಾ ಅವರು ಯಶ್ ಅವರ ತಾಯಿ ಆಗಿದ್ದು, ಈ ಸಿನಿಮಾ ಮೂಲಕ ನಿರ್ಮಾಪಕಿಯಾಗಿ ತಮ್ಮ ಪಾದಾರ್ಪಣೆ ಮಾಡಿದ್ದಾರೆ.
'ಬಂದ್ಮೇಲೆ ಹೋಗೋ ಜಾಯಮಾನ ಅಲ್ಲ. ನಾನು ಹಿಂತಿರುಗಲ್ಲ' ಎಂದು ಧೈರ್ಯದಿಂದ ಹೇಳಿದ್ದಾರೆ. ಈ ಸಿನಿಮಾ ಯಶಸ್ಸಿನ ಬಳಿಕ ಶರಣ್ ಅವರನ್ನು ನಾಯಕನಾಗಿ ಆಯ್ಕೆಮಾಡಿ ಮತ್ತೊಂದು ಚಿತ್ರ ನಿರ್ಮಿಸಲು ತಯಾರಿ ನಡೆಸಿದ್ದಾರೆ. ಶ್ರೀರಾಜು ಅವರೇ ನಿರ್ದೇಶಕರಾಗಲಿದ್ದು, ಕಥೆಯನ್ನು ಗಂಭೀರವಾಗಿ ತಯಾರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
"ನಾನು ಹಣದ ಹೆಸರಲ್ಲಿ ಈ ಕ್ಷೇತ್ರಕ್ಕೆ ಬಂದವಳು ಅಲ್ಲ. ಸಂದೇಶ ನೀಡುವ ಚಿತ್ರಗಳನ್ನೇ ಮಾಡಬೇಕು ಎಂಬುದು ನನ್ನ ಆಶಯ" ಎಂದು ಪುಷ್ಪಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಕೊತ್ತಲವಾಡಿ" ಆಗಸ್ಟ್ 1 ರಂದು ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
ವಿಷ್ಣುವರ್ಧನ್ ಸಿನಿಮಾಗೆ ಡೈರೆಕ್ಷನ್ ಕೊಡಬೇಕಿತ್ತಾ ರಮೇಶ್ ಅರವಿಂದ್? ಮಿಸ್ ಆದ ಆ ಅಪರೂಪದ ಅವಕಾಶ!

ಟ್ರೆಂಡಿಂಗ್ ಸುದ್ದಿ
ಕಾಂತಾರಕ್ಕೆ ಕೈಜೋಡಿಸಿದ ಗಾಯಕ ದಿಲ್ಜಿತ್ ಸಿಂಗ್: ರಿಷಬ್ ಶೆಟ್ಟಿ ನಿಜಕ್ಕೂ ಮಾಸ್ಟರ್ಪೀಸ್ ಎಂದ ಸಿಂಗರ್
