“ಬಿಗ್ ಬಾಸ್ ಮನೆಯೊಳಗೆ ಯಾರು ಬಂದ್ರೂ ಹ್ಯಾಂಡಲ್ ಮಾಡ್ತೀನಿ” – ಸ್ಪರ್ಧಿಗಳಿಗೆ ಸುದೀಪ್ ಖಡಕ್ ಮೆಸೇಜ್!


ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಶೀಘ್ರದಲ್ಲೇ ಆರಂಭವಾಗಲಿದ್ದು, ನಿರೂಪಣೆಯ ಜವಾಬ್ದಾರಿಯನ್ನು ಮತ್ತೆ ಕಿಚ್ಚ ಸುದೀಪ್ ಅವರು ಹೊತ್ತಿದ್ದಾರೆ. ಪ್ರೆಸ್ ಮೀಟ್ನಲ್ಲಿ ಮಾತನಾಡಿದ ಅವರು, ಈ ಬಾರಿ ಶೋ ಇನ್ನಷ್ಟು ಸವಾಲುಗಳಿಂದ ಕೂಡಿರುತ್ತದೆ ಎಂದರೆ ತಪ್ಪಲ್ಲ!
ಸುದೀಪ್ ಸ್ಪಷ್ಟವಾಗಿ ಹೇಳಿದ್ದು: “ಬಿಗ್ ಬಾಸ್ ಮನೆಯೊಳಗೆ ಯಾರು ಬಂದ್ರೂ ನಾನು ಹ್ಯಾಂಡಲ್ ಮಾಡ್ತೀನಿ. ಸ್ಪರ್ಧಿಗಳ ಓವರಾಗೋಕೆ ಅವಕಾಶ ಇಲ್ಲ” ಎಂಬುದಾಗಿದೆ. ಈ ಮಾತುಗಳಿಂದಲೇ ಈ ಸೀಸನ್ ಗಂಭೀರವಾಗಿರಬಹುದು ಎಂಬ ನಿರೀಕ್ಷೆ ಮೂಡಿದೆ.
ಹಾಗೆ, ಸಿನಿಮಾಗಳ ವಿಚಾರಕ್ಕೆ ಬಂದ್ರೆ ಸುದೀಪ್ ಈಗ ‘ಬಿಲ್ಲಾ ರಂಗ ಬಾಷಾ’ ಮತ್ತು ‘ಮ್ಯಾಕ್ಸ್ 2’ ಎಂಬ ಎರಡು ಮಹತ್ವದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಲೆವಲ್ನಲ್ಲಿ ತಯಾರಾಗುತ್ತಿರುವ ಬಿಲ್ಲಾ ರಂಗ ಬಾಷಾ ಸಿನಿಮಾಗೆ ಹನುಮಾನ್ ಖ್ಯಾತಿಯ ಚೈತನ್ಯ ಮತ್ತು ನಿರಂಜನ್ ರೆಡ್ಡಿ ಬಂಡವಾಳ ಹೂಡುತ್ತಿದ್ದಾರೆ. ಸುದೀಪ್ ಹೇಳಿದಂತೆ, “ನನ್ನ ಫಿಕ್ಸ್ಡ್ ರೇಟ್ ಅಂತ ಯಾವುದಿಲ್ಲ. ನಾನು ಬಿಸಿನೆಸ್ಮ್ಯಾನ್ ಕೂಡ. ಪ್ರಾಜೆಕ್ಟ್ ಮೇಲಾಗಿಯೇ ಕೊಲಾಬರೇಷನ್ ಮಾಡ್ತೀನಿ” ಎಂಬುದು ಸ್ಪಷ್ಟವಾಗಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
