"ಕನ್ನಡತಿ ಮತ್ತೆ ಸೀರಿಯಲ್ಗ್ ಬರ್ತಾರಾ?" – ಅಭಿಮಾನಿಗಳ ಪ್ರಶ್ನೆಗೆ ರಂಜನಿ ರಾಘವನ್ ನೀಡಿದ ಸ್ಪಷ್ಟ ಉತ್ತರ


‘ಪುಟ್ಟಗೌರಿ ಮದುವೆ’ ಮತ್ತು ‘ಕನ್ನಡತಿ’ ಧಾರಾವಾಹಿಗಳ ಮೂಲಕ ಮನೆಮಾತಾದ ರಂಜನಿ, “ಜನರು ಇಷ್ಟಪಡುವ ಪವರ್ ಇದೆ. ಆದರೆ ನಾವು ಮತ್ತೆ ಬಂದು ನಟಿಸಿದರೆ, ಅವರು ಅಷ್ಟಾಗಿ ಪ್ರತಿಕ್ರಿಯಿಸಬಲ್ಲದು. ಅಯ್ಯೋ, ಇವರು ಮತ್ತೆ ಬಂದ್ರು ಅನ್ನೋ ಭಾವನೆ ಮೂಡಬಹುದು” ಎಂದು ತಮ್ಮ ವೀಕ್ಷಣೆ ಹಂಚಿಕೊಂಡಿದ್ದಾರೆ.
ಪ್ರಸ್ತುತ ನಿರ್ದೇಶನದತ್ತ ಗಮನ ಹರಿಸಿರುವ ರಂಜನಿ, "ಸ್ವಪ್ನ ಮಂಟಪ ಸಿನಿಮಾನೇ ನನ್ನ ಕನಸು. ಆದರೆ ಈ ಕ್ಷೇತ್ರದಲ್ಲಿ ನಿಶ್ಚಿತತೆ ಎಂಬುದು ಇಲ್ಲ. ಪ್ರತಿ ಬಾರಿ ಕೆಲಸ ಸಿಗುತ್ತಾ ಎನ್ನುವ ಆತಂಕವಿದೆ" ಎಂದು ತಮ್ಮ ಭಾವನೆ ಬಿಚ್ಚಿಟ್ಟಿದ್ದಾರೆ.
ಅಲ್ಲದೆ, "ಇಷ್ಟವಿಲ್ಲದ ಪಾತ್ರ ಅಥವಾ ರಿಯಾಲಿಟಿ ಶೋ ಮಾಡಲು ಮನಸ್ಸು ಒಪ್ಪುವುದಿಲ್ಲ. ಇಲ್ಲದೇ ಹೋದಲ್ಲಿ, ಈ ಪ್ರೊಫೆಶನ್ ಬಿಟ್ಟು ಹೋಗಬೇಕೆಂಬ ಭಯ ಕೂಡ ಇದೆ" ಎಂದು ಹೇಳಿರುವ ರಂಜನಿ, ತಮ್ಮ ಭರವಸೆ ಹಾಗೂ ಅಚಲ ನಂಬಿಕೆಯಿಂದ ತಮ್ಮ ಗಮ್ಯವನ್ನೆಡೆರೆಯುತ್ತಿದ್ದಾರೆ. 'ಸ್ವಪ್ನ ಮಂಟಪ' ಸಿನಿಮಾ ಜುಲೈ 25ರಂದು ಬಿಡುಗಡೆಯಾಗಲಿದ್ದು, ನಿರ್ದೇಶಕಿಯಾಗಿ ರಂಜನಿಗೆ ಇದು ಮಹತ್ವದ ಹೆಜ್ಜೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
