ಕೊಡವ ಸಮುದಾಯದ ಬಗ್ಗೆ ವಿವಾದಾತ್ಮಕ ಹೇಳಿಕೆ: ಮತ್ತೆ ಟೀಕೆಗೆ ಗುರಿಯಾದ ರಶ್ಮಿಕಾ ಮಂದಣ್ಣ


ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ, ಕೊಡವ ಸಮುದಾಯವನ್ನು ಉಲ್ಲೇಖಿಸಿ ನೀಡಿದ ಹೊಸ ಹೇಳಿಕೆಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಟೀಕೆಗೆ ಗುರಿಯಾಗಿದ್ದಾರೆ. ‘ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದವಳು ನಾನೊಬ್ಬಳೇ’ ಎಂಬ ಸಂದರ್ಶನದ ಮಾತುಗಳು ಜನರ ಕೆರಳಿಗೆ ಕಾರಣವಾಗಿವೆ.
ಈ ಹೇಳಿಕೆಯಲ್ಲಿ ರಶ್ಮಿಕಾ, ತಮ್ಮ ಸಮುದಾಯದಿಂದ ಯಾರೂ ಚಿತ್ರರಂಗಕ್ಕೆ ಬಂದಿಲ್ಲವೆಂದು ಹೇಳಿದ್ದು, ಹಿರಿಯ ನಟಿ ಪ್ರೇಮಾ ಸೇರಿದಂತೆ ಹಲವಾರು ಕೊಡವ ಕಲಾವಿದರನ್ನು ನಿರ್ಲಕ್ಷಿಸಿರುವಂತೆ ತೋರ್ಪಡಿಸಿದೆ. ಪ್ರೇಮಾ, ಹರ್ಷಿಕಾ ಪೂಣಚ್ಚ, ಕೃಷಿ ತಾಪಂಡ, ನಿಧಿ ಸುಬ್ಬಯ್ಯ, ಡೈಸಿ ಬೋಪಣ್ಣ ಮತ್ತು ಶ್ವೇತಾ ಚಂಗಪ್ಪ ಮುಂತಾದರು ಕೊಡವ ಸಮುದಾಯದ ಹೆಮ್ಮೆಯ ತಾರೆಗಳು ಎಂಬುದು ಜನರ ಅಭಿಪ್ರಾಯ.
ಈ ಹಿಂದೆ ಕನ್ನಡ ಸಂಸ್ಕೃತಿ ಮತ್ತು ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆಗಳಿಂದ ಟೀಕೆಗೆ ಗುರಿಯಾಗಿದ್ದ ರಶ್ಮಿಕಾ, ಈಗ ತಮ್ಮ ಸಮುದಾಯದ ಕಲಾವಿದರ ಇತಿಹಾಸವನ್ನು ಅರಿಯದೇ ಮಾಡಿದ ಹೇಳಿಕೆಯಿಂದ ಮತ್ತೊಮ್ಮೆ ಅಸಂತೋಷಕ್ಕೆ ಕಾರಣವಾಗಿದ್ದಾರೆ. ಜನರು ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಅವರಿಗೆ, ಇಂತಹ ಹೇಳಿಕೆಗಳಿಂದ ದೂರವಿರಲು ಹಾಗೂ ತಮ್ಮ ಸಮುದಾಯದ ತಾರೆಯರನ್ನು ಗೌರವಿಸುವಂತೆ ಸಲಹೆ ನೀಡಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
