‘ಮೆಟ್ನಲ್ಲಿ ಹೊಡಿತೀನಿ ಎಂದಿದ್ದು ಸರಿ, ಬುರುಡೆ ಒಡಿತೀನಿ ಎಂದಿದ್ದು ತಪ್ಪಾ?’ ಮಂಜು-ರಜತ್ ಮಧ್ಯೆ ಮಾತಿನ ಚಕಮಕಿ


‘ಮೆಟ್ನಲ್ಲಿ ಹೊಡಿತೀನಿ ಎಂದಿದ್ದು ಸರಿ, ಬುರುಡೆ ಒಡಿತೀನಿ ಎಂದಿದ್ದು ತಪ್ಪಾ?’ ಮಂಜು-ರಜತ್ ಮಧ್ಯೆ ಮಾತಿನ ಚಕಮಕಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ ನಲ್ಲಿ ಮತ್ತೊಮ್ಮೆ ಮಾತಿನ ಜಟಾಪಟಿ, ಮಂಜು ಮತ್ತು ರಜತ್ ನಡುವೆ ತೀವ್ರ ವಾಗ್ವಾದವಾಗಿದೆ. ಮಣ್ಣಿನಿಂದ ಗುರಾಣಿ ಮಾಡುವ ಟಾಸ್ಕ್ ಸಂದರ್ಭದಲ್ಲಿ, ‘ಬುರುಡೆ ಒಡಿತೀನಿ’ ಎಂದು ರಜತ್ ಮಾಡಿದ ಹೇಳಿಕೆ ಮಂಜುವಿಗೆ ಅಸಮಾಧಾನ ಉಂಟುಮಾಡಿತು. ಇದರಿಂದ ಗಲಾಟೆ ಮತ್ತಷ್ಟು ಭುಗಿಲೆದ್ದಿದೆ.
ಮಂಜು ಕೋಪಗೊಂಡು, “ರಾಜನಿಗೆ ಅವಮಾನ ಮಾಡಿದರೆ ಶಿಕ್ಷೆ ಕೊಡ್ತೀವಿ” ಎಂದು ತೀವ್ರ ಪ್ರತಿಕ್ರಿಯೆ ನೀಡಿದರು. ಆದರೆ ರಜತ್, “ಮೆಟ್ನಲ್ಲಿ ಹೊಡಿತೀನಿ ಅನ್ನೋದು ಸರಿಯಾ? ಬುರುಡೆ ಒಡಿತೀನಿ ಅನ್ನೋದು ತಪ್ಪಾ?” ಎಂದು ಪ್ರಶ್ನೆ ಮಾಡಿದರು. ಇಬ್ಬರ ನಡುವೆ ಮಾತಿನ ಕೌಂಟರ್ಗಳು ಮುಂದುವರಿದಂತೆ ವಾತಾವರಣ ಇನ್ನಷ್ಟು ಗಡಿಬಿಡಿಯಾಗಿತ್ತು.
ಮಂಜು ಸಮಜಾಯಿಶಿ ನೀಡಲು ಪ್ರಯತ್ನಿಸಿದರೂ, ರಜತ್ ತಾವು ಹೇಳಿದುದನ್ನೂ ಅದೇ ರೀತಿ ಸಮರ್ಥಿಸಿಕೊಂಡರು. ಈ ಘಟನೆದಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಬಿರುಗಾಳಿ ಎದ್ದಿದ್ದು, ಗಲಾಟೆ ಮುಂದುವರಿಯುವ ಸಾಧ್ಯತೆ ಇದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
