ಅಮ್ಮನ ತಾಳಿ ಅಡವಿಟ್ಟು ಬಾಡಿಗೆ ಮನೆ ವಾಸ – ಶೋಭಾ ಶೆಟ್ಟಿ ನಟನೆಯ ಉಜ್ವಲ ಪಯಣದ ಹಿಂದೆ ನೋವಿನ ಕಥೆ!


ಕನ್ನಡದವರಾಗಿದ್ದರೂ, ತೆಲುಗು ಪ್ರೇಕ್ಷಕರಲ್ಲಿ ಖುಷಿಪಡಿಸಿದ ಬಿಗ್ ಬಾಸ್ ಖ್ಯಾತಿಯ ನಟಿ ಶೋಭಾ ಶೆಟ್ಟಿ ತಮ್ಮ ಜೀವನದ ಕಠಿಣ ಘಟಕಗಳನ್ನು ಇತ್ತೀಚೆಗಿನ ಪಾಡ್ಕ್ಯಾಸ್ಟ್ ಮೂಲಕ ಹೊರಹಾಕಿದ್ದಾರೆ. ‘ಕಿಸ್ಸಿಕ್ ಟಾಕ್ಸ್’ ಎಂಬ ಪಾಡ್ಕ್ಯಾಸ್ಟ್ನಲ್ಲಿ ಭಾಗವಹಿಸಿದ್ದ ಶೋಭಾ ತಮ್ಮ ವೃತ್ತಿಜೀವನ, ಪ್ರೇಮ, ಮದುವೆ ಹಾಗೂ ಹೋರಾಟದ ದಿನಗಳ ಬಗ್ಗೆ ಮನದಟ್ಟಾಗಿ ಮಾತನಾಡಿದರು.
ಕಷ್ಟದ ದಿನಗಳು ತಾಯಿಯ ತಾಳಿ ಅಡವಿಟ್ಟು ಬದುಕಿದ ದಿನಗಳು, ತಮ್ಮ ವೃತ್ತಿಯ ಆರಂಭಿಕ ಹಂತದಲ್ಲಿ ಆರ್ಥಿಕವಾಗಿ ತುಂಬಾ ಸಂಕಷ್ಟ ಎದುರಿಸಿದ ಶೋಭಾ, “ಆಡಿಷನ್ಗಳಿಗೆ ಹೋಗೋಕೆ ಫೋಟೋ ತೆಗೆದುಕೊಳ್ಳೋಕೆ ನಮ್ಮ ಬಳಿ ಹಣವಿರಲಿಲ್ಲ. ಅಮ್ಮನ ಮಂಗಳಸೂತ್ರವನ್ನು ಅಡವಿಟ್ಟು, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೆವು. ಅನೇಕರಂತೆ ವಿಮಾನ ನಿಲ್ದಾಣದಲ್ಲಿಯೂ ಮಲಗಿದ ಅನುಭವವಿದೆ” ಎಂಬುದನ್ನು ಬಹಿರಂಗಪಡಿಸಿದರು. ಶೋಭಾ 2017ರಲ್ಲಿ ಪುನೀತ್ ರಾಜ್ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಜೊತೆ ‘ಅಂಜನಿ ಪುತ್ರ’ ಚಿತ್ರದಲ್ಲಿ ನಟಿಸಿದರು. ತೆಲುಗಿನಲ್ಲಿ ‘ಕಾವೇರಿ’ ಧಾರಾವಾಹಿಯ ಮೂಲಕ ಪರಿಚಿತರಾಗಿ, ನಂತರ ‘ಅಷ್ಟಚಮ್ಮ’, ‘ಲಾಹಿರಿ ಲಾಹಿರಿ’, ‘ಅತ್ತಾರಿಂಟಿಕಿ ದಾರೇದಿ’, ‘ಹಿಟ್ಲರ್ ಗರಿ ಪೆಲ್ಲಂ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ‘ಕಾರ್ತಿಕ ದೀಪಂ’ ಎಂಬ ಧಾರಾವಾಹಿಯ ಡಾ. ಮೋನಿತಾ ಪಾತ್ರದಿಂದ ಅವರು ದೊಡ್ಡ ಮಟ್ಟದ ಹೆಸರು ಗಳಿಸಿದರು.
‘ಬಿಗ್ ಬಾಸ್ ತೆಲುಗು ಸೀಸನ್ 7’ ಮೂಲಕ ಅವರು ಗಮನ ಸೆಳೆದರೂ, ನಕಾರಾತ್ಮಕ ಇಮೇಜ್ ಕಾರಣದಿಂದ ಶೋದಿಂದ ಹೊರಬಿದ್ದರು. ನಂತರ ಕನ್ನಡ ಬಿಗ್ ಬಾಸ್ನಲ್ಲೂ ಅವರು ಕಾಣಿಸಿಕೊಂಡರು. ಪಾಡ್ಕ್ಯಾಸ್ಟ್ನಲ್ಲಿ ಶೋಭಾ ತಮ್ಮ ಪ್ರೇಮಿ ಮತ್ತು ನಟ ಯಶವಂತ್ ಬಗ್ಗೆ ಬಹಿರಂಗವಾಗಿ ಮಾತನಾಡಿದರು. “ಬಾಬು ಗರು (ಯಶವಂತ್) ನನ್ನ ಪ್ರೀತಿಯನ್ನು ತಕ್ಷಣ ಒಪ್ಪಲಿಲ್ಲ. ಆದರೆ ಅವನಿಲ್ಲದೇ ಜೀವನ ಊಹಿಸಲಾಗದು,” ಎಂದು ಭಾವನಾತ್ಮಕವಾಗಿ ಹೇಳಿದರು. ಇವರಿಬ್ಬರು ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, 2025ರ ಮದುವೆಗೆ ಯೋಜನೆ ರೂಪಿಸಿದ್ದಾರೆ.
ಇತ್ತೀಚೆಗಿನ ಬಿಳಿ ಸೀರೆಯ ಫೋಟೋಶೂಟ್ ವೈರಲ್ ಆಗಿತ್ತು. ಈ ಬಗ್ಗೆ ಶೋಭಾ ಸ್ಪಷ್ಟಪಡಿಸಿದರು, “ನಾವು ಗೋವಾಕ್ಕೆ ಹೋಗಿದ್ದೆವು. ಮಳೆಯ ಕಾರಣ ಈಜುಕೊಳ ಬಳಸಿ ಫೋಟೋ ಮತ್ತು ವಿಡಿಯೋ ಶೂಟ್ ಮಾಡಲಾಯಿತು.” ಒಟ್ಟಾರೆ, ಶೋಭಾ ಶೆಟ್ಟಿ ಅವರ ಜೀವನ, ಹೋರಾಟ ಮತ್ತು ಪ್ರೇಮ ಕಥೆಯು ಹಲವರಿಗೆ ಸ್ಪೂರ್ತಿಯಾಗಿದ್ದು, ಅವರ ಮುನ್ನಡೆಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
