Back to Top

ಪ್ರೀತಿ ಮದುವೆ, ಕಷ್ಟದ ದಿನ, ವೃತ್ತಿ ಯಾನ… ರಾಯರ ಆಶೀರ್ವಾದದಿಂದಲ್ಲದೆ ಏನೂ ಸಾಧ್ಯವಿಲ್ಲ: ಜಗ್ಗೇಶ್

SSTV Profile Logo SStv July 10, 2025
ಜಗ್ಗೇಶ್ ಭಕ್ತಿಯಿಂದ ಭಾವುಕ ಮಾತು!
ಜಗ್ಗೇಶ್ ಭಕ್ತಿಯಿಂದ ಭಾವುಕ ಮಾತು!

ಪ್ರಖ್ಯಾತ ನಟ ಜಗ್ಗೇಶ್ ತಮ್ಮ ಜೀವನದ ಬಹುತೇಕ ಭಾಗವನ್ನು ಶ್ರೀ ರಾಘವೇಂದ್ರ ಸ್ವಾಮಿಗಳ ಕೃಪೆಗೆ ಅರ್ಪಿಸಿದ್ದಾರೆ. ರಾಯರ ಮೇಲಿನ ಅಪಾರ ಭಕ್ತಿಯು ಜಗ್ಗೇಶ್ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ತಂದಿದೆ ಎಂಬುದನ್ನು ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಜಗ್ಗೇಶ್ ಅವರು ತಮ್ಮ ಪತ್ನಿ ಪರಿಮಳ ಅವರನ್ನು ಮದುವೆಯಾಗಿದ ನಂತರ ಸಮಾಜದಿಂದ ದೂರಡಲ್ಪಟ್ಟ ಸಂದರ್ಭದಲ್ಲೂ, ಅವರು ಮಂತ್ರಾಲಯಕ್ಕೆ ಹೋಗಿ ರಾಯರ ಆಶೀರ್ವಾದವನ್ನು ಪಡೆದಿದ್ದಾರೆ. ಅಲ್ಲಿಂದಲೇ ಅವರ ಜೀವನದಲ್ಲಿ ಬೆಳಕಿನ ಹೊಳಪು ಪ್ರಾರಂಭವಾಯಿತು.

"ನಿತ್ಯ ಮಠದಲ್ಲಿ ಊಟ, ರಾಯರ ಗುಡಿಯ ಸುತ್ತಾಟ, ಟೆಂಟ್‌ನಲ್ಲಿ ಸಿನಿಮಾ ನೋಡೋದು" ಎನ್ನುವಂತೆ ತಾವು ಮಂತ್ರಾಲಯದಲ್ಲಿ ಕಳೆದ ದಿನಗಳನ್ನು ಸ್ಮರಿಸುತ್ತಾರೆ. ಅವರು ತಮ್ಮ ಮಕ್ಕಳಿಗೆ ಗುರುರಾಜ್, ಯತಿರಾಜ್, ಹಾಗೂ ಮೊಮ್ಮಗನಿಗೆ ಅರ್ಜುನ ಎಂಬ ಪವಿತ್ರ ಹೆಸರುಗಳನ್ನು ಇಟ್ಟಿದ್ದು, ರಾಯರ ನಂಬಿಕೆಗೆ ಸಾಕ್ಷಿ. ಜಗ್ಗೇಶ್ ಅವರು ದಿವಂಗತ ಡಾ. ರಾಜ್‌ಕುಮಾರ್ ಅವರನ್ನೂ ‘ಎರಡನೇ ರಾಯರಂತೇ ಕರೆದಿದ್ದು, ಅವರಿಂದಲೇ ತಮ್ಮ ಭಕ್ತಿಗೆ ಇನ್ನಷ್ಟು ಬಲ ಬಂತು ಎಂದು ಹೇಳಿದರು. ರಾಯರ ಅಪಾರ ಕೃಪೆಯು ಜಗ್ಗೇಶ್ ಜೀವನದ ದಿಕ್ಕನ್ನೇ ಬದಲಾಯಿಸಿದೆ ಎಂಬುದು ಸ್ಪಷ್ಟವಾಗಿದೆ.