ಮಹದಾಯಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ಹುಬ್ಬಳ್ಳಿಯಲ್ಲಿ ಶಿವರಾಜ್ಕುಮಾರ್ ಭರವಸೆ


ಮಹದಾಯಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ಹುಬ್ಬಳ್ಳಿಯಲ್ಲಿ ಶಿವರಾಜ್ಕುಮಾರ್ ಭರವಸೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಪತ್ನಿ ಗೀತಾ ಜತೆ ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರಕ್ಕೆ ಭೇಟಿ ನೀಡಿ, ತಮ್ಮ ಹೊಸ ಚಿತ್ರ ಭೈರತಿ ರಣಗಲ್ ಪ್ರಚಾರದಲ್ಲಿ ಭಾಗವಹಿಸಿದರು. ಅಭಿಮಾನಿಗಳಿಗೆ ತೆರೆದ ವಾಹನದ ಮೇಲೆ ನಿಂತು ಅಭಿನಂದನೆ ಸಲ್ಲಿಸಿದ ಶಿವಣ್ಣ, ತಮ್ಮ ಕುಟುಂಬ ಮತ್ತು ಹುಬ್ಬಳ್ಳಿಯ ನಡುವೆ ಇರುವ ದೀರ್ಘ ನಂಟನ್ನು ಸ್ಮರಿಸಿಕೊಂಡರು.
ಮಹದಾಯಿ ಹೋರಾಟಕ್ಕೆ ಕನ್ನಡ ಚಿತ್ರರಂಗದ ಬೆಂಬಲ ಸಿಗಲಿದೆ ಎಂದು ಭರವಸೆ ನೀಡಿದ ಶಿವಣ್ಣ, ಈ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಾಗಿ ಭಾಗವಹಿಸುವುದಾಗಿ ಘೋಷಿಸಿದರು. ಭೈರತಿ ರಣಗಲ್ ಚಿತ್ರಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದಾಗಿ ಹೇಳಿದರು.
ಆರೋಗ್ಯ ಮತ್ತು ಮುಂದಿನ ಯೋಜನೆಗಳು
ಶಿವರಾಜ್ಕುಮಾರ್ ಅವರು ಮುಂಬರುವ ತಿಂಗಳಲ್ಲಿ ತಮ್ಮ ಆರೋಗ್ಯ ಸಮಸ್ಯೆಗಾಗಿ ಅಮೆರಿಕಕ್ಕೆ ಚಿಕ್ಕ ಶಸ್ತ್ರಚಿಕಿತ್ಸೆಗೆ ತೆರಳಲಿದ್ದು, ಬಳಿಕ ಶೂಟಿಂಗ್ ಕಾರ್ಯಕ್ಕೆ ಮರಳುವ ಯೋಜನೆ ಹೊಂದಿದ್ದಾರೆ. ತಮ್ಮ ಹೊಸ ಸಿನಿಮಾದ ಯೋಜನೆಗಳಾದ ಎ ಫಾರ್ ಆನಂದ್ ಮತ್ತು ಫೈಯರ್ ಕುರಿತು ವಿವರ ಹಂಚಿಕೊಂಡರು.
ಅಭಿಮಾನಿಗಳ ಪ್ರೀತಿಗೆ ಸಂತಸ ವ್ಯಕ್ತಪಡಿಸಿರುವ ಶಿವಣ್ಣ, ಮುಂದಿನ ದಿನಗಳಲ್ಲಿ ಕುಟುಂಬ ಕತೆಯ ಆಧಾರಿತ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
