Back to Top

ಫೈರ್‌ ಬ್ರ್ಯಾಂಡ್ ಬಾಯಲ್ಲಿ ಆಲೂಗಡ್ಡೆ ತುರುಕಿದ ಉಗ್ರಂ ಮಂಜು ಪಾಪ ಚೈತ್ರಾ ಕುಂದಾಪುರ

SSTV Profile Logo SStv November 25, 2024
ಫೈರ್‌ ಬ್ರ್ಯಾಂಡ್ ಬಾಯಲ್ಲಿ ಆಲೂಗಡ್ಡೆ ತುರುಕಿದ ಉಗ್ರಂ ಮಂಜು
ಫೈರ್‌ ಬ್ರ್ಯಾಂಡ್ ಬಾಯಲ್ಲಿ ಆಲೂಗಡ್ಡೆ ತುರುಕಿದ ಉಗ್ರಂ ಮಂಜು
ಫೈರ್‌ ಬ್ರ್ಯಾಂಡ್ ಬಾಯಲ್ಲಿ ಆಲೂಗಡ್ಡೆ ತುರುಕಿದ ಉಗ್ರಂ ಮಂಜು ಪಾಪ ಚೈತ್ರಾ ಕುಂದಾಪುರ ಬಿಗ್‌ಬಾಸ್ ಕನ್ನಡ ಸೀಸನ್ 11 ಹೊಸ ಟ್ವಿಸ್ಟ್‌ ನೀಡಿದ್ದು, ಈ ವಾರ ಮನೆ ಸಾಮ್ರಾಜ್ಯವಾಗಿ ಬದಲಾಗಿದೆ. ಕ್ಯಾಪ್ಟನ್ ಉಗ್ರಂ ಮಂಜು ಮಹಾರಾಜನಾಗಿ ಅಧಿಕಾರ ಹಿಡಿದಿದ್ದು, ಪ್ರಜೆಗಳಾದ ಸ್ಪರ್ಧಿಗಳನ್ನು ಕಕ್ಕಾಬಿಕ್ಕಿ ಮಾಡುತ್ತಿದ್ದಾರೆ. ಮಹಾರಾಜ ಮಂಜು ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ನೀಡುತ್ತಿದ್ದು, ಇದರಲ್ಲಿ ಚೈತ್ರಾ ಕುಂದಾಪುರ ಬಲಿಯಾಗಿದ್ದಾರೆ. ಬಹಳಷ್ಟು ಸೌಂಡ್ ಮಾಡುತ್ತಿದ್ದ ಚೈತ್ರಾ ಅವರ ಬಾಯಿಗೆ ಆಲೂಗಡ್ಡೆ ತುರುಕುವಂತೆ ಮಂಜು ಆದೇಶಿಸಿದ್ದು, ಕೆಲ ಹೊತ್ತು ಚೈತ್ರಾ ಸುಮ್ಮನಾಗಿದ್ದರೂ, ಬಳಿಕ "ನಾನು ಖಂಡಿಸುತ್ತೇನೆ!" ಎಂದು ಸೌಂಡ್ ಮಾಡಿದ್ದಾರೆ. ಈ ಟಾಸ್ಕ್ ಬಿಗ್‌ಬಾಸ್ ಮನೆಗೆ ಹೊಸ ಮಟ್ಟದ ರೋಚಕತೆಯನ್ನು ತಂದಿದ್ದು, ಮಹಾರಾಜನ ಮುಂದಿನ ದರ್ಬಾರ್ ಹೇಗಿರುತ್ತದೆಯೋ ಅನ್ನುವುದು ಕುತೂಹಲ ಹೆಚ್ಚಿಸಿದೆ.