'ಹಿಟ್ಲರ್ ಕಲ್ಯಾಣ'ನ ವಿಲನ್ ಈಗ ಉರ್ಮಿಳಾ ದಿವಾನ್ – ರಜಿನಿಯ ಹೊಸ ಅವತಾರಕ್ಕೆ ಅಭಿಮಾನಿಗಳ ಫಿಧಾ!


ಅಮೃತವರ್ಷಿಣಿ ಧಾರಾವಾಹಿಯಿಂದ ಮನೆಮಾತಾದ ನಟಿ ರಜಿನಿ, ದಶಕಗಳ ನಂತರ ಮತ್ತೆ ಸ್ಟಾರ್ ಸುವರ್ಣ ವಾಹಿನಿಗೆ ಭರ್ಜರಿ ಮರಳಿದ್ದಾರೆ. ಈ ಬಾರಿ ಅವರು ‘ನೀ ಇರಲು ಜೊತೆಯಲ್ಲಿ’ ಧಾರಾವಾಹಿಯಲ್ಲಿ ಉರ್ಮಿಳಾ ದಿವಾನ್ ಎಂಬ ಶಕ್ತಿಶಾಲಿ ನೆಗೆಟಿವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ದರ್ಪದ ಅತ್ತಿಗೆ ಪಾತ್ರದಲ್ಲಿ ಕಾಣಿಸುತ್ತಿರುವ ರಜಿನಿ, ಮನೆಮಂದಿಯ ಮೇಲೆ ಅಡಚಣೆ ಮಾಡುವ ನಿರ್ದಯ ಮಹಿಳೆಯಾಗಿ ನಟನೆ ಮಾಡಿದ್ದಾರೆ. ಆದರೆ ಈ ಅತ್ತಿಗೆಗೆ ಎದುರಾಗೋ ಒಬ್ಬನೇ ವ್ಯಕ್ತಿ – ನಾಯಕ! ಇವರಿಬ್ಬರ ನಡುವೆ ನಡೆಯುವ ಟಗ್ ಆಫ್ ವಾರ್ ಧಾರಾವಾಹಿಯ ಪ್ರಮುಖ ಆಕರ್ಷಣೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಪವನ್ ನಾಯಕನಾಗಿ, ಸಲೋಮಿ ಡಿಸೋಜಾ ನಾಯಕಿಯಾಗಿ ಅಭಿನಯಿಸುತ್ತಿರುವ ಈ ಧಾರಾವಾಹಿಗೆ, ಖ್ಯಾತ ನಿರ್ದೇಶಕ ಧರಣಿ ಜಿ. ರಮೇಶ್ ನಿರ್ದೇಶನ ಹಾಗೂ ನಿರ್ಮಾಣ ಮಾಡುತ್ತಿದ್ದಾರೆ.
ರಜಿನಿ ಅಭಿಮಾನಿಗಳಿಗೆ ಇದು ಸಾಂತ್ವನದ ಸುದ್ದಿ. ನಟನೆ, ಹೊಸ ಲುಕ್ ಮತ್ತು ಶಕ್ತಿಯುತ ಪಾತ್ರದೊಂದಿಗೆ ರಜಿನಿ ಮತ್ತೊಮ್ಮೆ ಕಿರುತೆರೆಯಲ್ಲಿ ಗರ್ಜಿಸಲು ಸಿದ್ಧರಾಗಿದ್ದಾರೆ!
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
