Back to Top

ಬಿಗ್ ಬಾಸ್ 11 ಚೈತ್ರಾ ಕುಂದಾಪುರ ಸಂಕಟ, ಕಣ್ಣೀರು ಹಾಕಿದ ಕ್ಷಣ

SSTV Profile Logo SStv December 12, 2024
ಚೈತ್ರಾ ಕುಂದಾಪುರ ಸಂಕಟ, ಕಣ್ಣೀರು ಹಾಕಿದ ಕ್ಷಣ
ಚೈತ್ರಾ ಕುಂದಾಪುರ ಸಂಕಟ, ಕಣ್ಣೀರು ಹಾಕಿದ ಕ್ಷಣ
ಬಿಗ್ ಬಾಸ್ 11 ಚೈತ್ರಾ ಕುಂದಾಪುರ ಸಂಕಟ, ಕಣ್ಣೀರು ಹಾಕಿದ ಕ್ಷಣ ಕ್ಯಾಪ್ಟನ್ಸಿ ರೇಸ್ ಸ್ಪರ್ಧೆ ತೀವ್ರತೆಗೆ ತಲುಪಿದೆ. ಹನುಮಂತ ಮತ್ತು ಗೌತಮಿ ತಂಡಗಳ ನಡುವೆ ನಾಯಕನ ಆಯ್ಕೆಯ ಟಾಸ್ಕ್ ನಡೆಯುತ್ತಿದ್ದು, ಚೈತ್ರಾ ಕುಂದಾಪುರ ತಮ್ಮ ತಂಡದಲ್ಲಿ ಅವಕಾಶದ ಕೊರತೆಯಿಂದ ನೊಂದಿದ್ದಾರೆ. ಗೌತಮಿ ತಂಡದ ಪರ ಆಟ ಆಡಲು ಅವಕಾಶ ಸಿಗದಿದ್ದು, ಇದಕ್ಕೆ ಚೈತ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಆಡಕ್ಕೆ ಕೊಡಲ್ಲ, ನನ್ನನ್ನು ಉಸ್ತುವಾರಿ ಮಾಡುತ್ತಾರೆ," ಎಂದು ಬೇಸರಗೊಂಡು ಕಣ್ಣೀರು ಹಾಕಿದ್ದಾರೆ. ಇತ್ತೀಚೆಗಷ್ಟೇ ಎಲಿಮಿನೇಷನ್ ನಿಂದ ಮರಳಿದ ಚೈತ್ರಾ, ಈಗಲೂ ತಮ್ಮ ಆಟಕ್ಕೆ ಸಿಗುತ್ತಿರುವ ಮಿತಿಯ ಬಗ್ಗೆ ವ್ಯಥೆ ವ್ಯಕ್ತಪಡಿಸಿದರು. ಅಂತಿಮವಾಗಿ ಟಾಸ್ಕ್​​ನಲ್ಲಿ ಸೋಲಿನ ನಂತರ, ಗೌತಮಿ ಕ್ಯಾಪ್ಟನ್ಸಿ ರೇಸ್​​ನಿಂದ ಚೈತ್ರಾ ಹೆಸರನ್ನು ಹೊರಗಿಟ್ಟಿದ್ದು, ಚೈತ್ರಾಳಿಗೆ ಸಹಿಸಲಾರದ ಸಂಕಟ ತಂದಿದೆ. ಇಂದಿನ ಸಂಚಿಕೆಯಲ್ಲಿ ಈ ಘಟನೆಯ ಮುಂದಿನ ಹಂತ ಏನಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಉಂಟಾಗಿದೆ.